ಪಿಎಫ್‌ಐನ ಆಪ್ತರಾಗಿದ್ದಾರೆ ಕಾಂಗ್ರೆಸ್‌ ! – ಜಿ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಧಾರವಾಡ – ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 1700 ಪಿಎಫ್‌ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡಗಡೆ ಮಾಡಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನ ಡಿಕೆ ಶಿವಕುಮಾರ ಇವರು ಕುಕ್ಕರ್‍‌ ಸ್ಫೋಟದಲ್ಲಿನ ದೋಷಿಗಳಿಗೆ ರಕ್ಷಿಸುವ ಪ್ರಯತ್ನ ಮಾಡಿದ್ದರು. ಪಿಎಫ್‌ಐ ನವರು ದೇಶ ಒಡೆಯುವ ಕೆಲಸ ಮಾಡಿದ್ದಾರೆ., ಸಮಾಜವನ್ನು ಒಡೆಯಲು ಯತ್ನಿಸಿದ್ದರು, ಇವರಿಗೆಲ್ಲ ಸಿದ್ದರಾಮಯ್ಯ ಪೋಷಕರು, ಆಪ್ತರಾಗಿದ್ದರು.. ಇಂತಹವರಿಗೆ ಸಮಾಜದಲ್ಲಿ ಸ್ಥಾನ ನೀಡಬಾರದು, ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಅವರು ಧಾರವಾಡದಲ್ಲಿನ ಒಂದು ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.