ಹಿಂದೂ ಸೇವಾ ಸಮಿತಿ ವತಿಯಿಂದ ಬಾ. ಸೌಂದತ್ತಿ (ಬೆಳಗಾವಿ)ಯಲ್ಲಿ ಬೃಹತ್ ಹಿಂದೂ ಸಮಾವೇಶ

ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ

ಬೆಂಗಾವಿ – ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಜನವರಿ 20 ರಂದು ಹಿಂದೂ ಸೇವಾ ಸಮಿತಿ ವತಿಯಿಂದ ಇಲ್ಲಿನ ರಾಯಬಾಗ್‌ ತಾಲೂಕಿನ ಬಾ. ಸೌಂದತ್ತಿಯಲ್ಲಿ ಬೃಹತ್ ಹಿಂದೂ ಸಮಾವೇಶದ ಆಯೋಜನೆ ಮಾಡಲಾಗಿದೆ. ಇಲ್ಲಿನ ಮಹಂತ ಮಠದಲ್ಲಿ ಸಂಜೆ 5.30 ಕ್ಕೆ ನಡೆಯುವ ಈ ಸಮಾವೇಶಕ್ಕೆ ಹುಕ್ಕೇರಿಯ ಕ್ಯಾರಗುಡ್ಡದ ಪುಣ್ಯಕ್ಷೇತ್ರ ಅವಜಿಕರ ಅಶ್ರಮದ ಶ್ರೀ ಸ ಸ ಅಭಿನವ ಮಂಜುನಾಥ ಸ್ವಾಮಿಗಳ ದಿವ್ಯ ಸಾನಿಧ್ಯ ಇರಲಿದೆ. ಅಲ್ಲದೇ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರು ಹಾಗೂ ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಶ್ರೀ. ವಿಠ್ಠಲ ಮಾಳಿ ಇವರೂ ಉಪಸ್ಥಿತ ಇರಲಿದ್ದಾರೆ. ಅದೇ ರೀತಿ ಪ್ರಖ್ಯಾತ ವಾಗ್ಮಿ ಚೈತ್ರಾ ಕುಂದಾಪುರ ಇವರು ವಕ್ತಾರರಾಗಿ ಉಪಸ್ಥಿತರಿರಲಿದ್ದಾರೆ. ಸಮಸ್ತ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಆಯೋಜಕರು ಕರೆ ನೀಡಿದ್ದಾರೆ.