ಜಾವೇದ ಅಖ್ತರ್ ಇವರು ಸಂಘದ ವಿಷಯವಾಗಿ ಕೊಟ್ಟಿರುವ ಹೇಳಿಕೆಯು ನಿಂದನೀಯವಾಗಿದೆ. ಅವರು ಸಂಘವನ್ನು ತಿಳಿದುಕೊಳ್ಳಬೇಕು ! – ಡಾ. ಕರಾಡ, ಕೇಂದ್ರದ ಹಣಕಾಸು ರಾಜ್ಯ ಸಚಿವರು

ಸಂಘವು ತಾಲಿಬಾನಿಯಾಗಿದ್ದರೆ ಜಾವೇದ ಅಖ್ತರರಿಗೆ ಈ ರೀತಿ ಸಂಘದ ಮೇಲೆ ಆರೋಪ ಮಾಡುವ ಧೈರ್ಯವು ಬರುತ್ತಿತ್ತೇನು ? – ಸಂಪಾದಕರು

ನೆವಾಸೆ(ನಗರ) ಸೆಪ್ಟೆಂಬರ್ ೭ – ಜಾವೇದ ಅಖ್ತರ ಇವರು ಸಂಘದ ವಿಷಯವಾಗಿ ನೀಡಿರುವ ಹೇಳಿಕೆ ಅತ್ಯಂತ ದ್ವೇಷಪೂರಿತವಾಗಿದೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಾಲಿಬಾನಿಗಳ ಜೊತೆ ತುಲನೆ ಮಾಡಿದರು, ಅದನ್ನು ನಾನು ಖಂಡಿಸುತ್ತೇನೆ. ಸಂಘದಲ್ಲಿ ಪ್ರತಿಯೊಬ್ಬ ವ್ಯಕ್ತಿ ರಾಷ್ಟ್ರದ ಹಿತಕ್ಕಾಗಿ, ರಾಷ್ಟ್ರಭಕ್ತಿಗಾಗಿ ಮತ್ತು ರಾಷ್ಟ್ರದ ಉನ್ನತಿಗಾಗಿ ಕೆಲಸವನ್ನು ಮಾಡುತ್ತಾರೆ. ಅಖ್ತರ ಇವರು ಸಂಘದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ, ಎಂಬ ಸಲಹೆಯನ್ನು ಕೆಂದ್ರಿಯ ಹಣಕಾಸು ರಾಜ್ಯ ಸಚಿವ ಡಾ. ಭಾಗವತ ಕರಾಡ ಇವರು ನೀಡಿದ್ದಾರೆ. ಡಾ. ಕರಾಡ ಇವರು ಸೆಪ್ಟೆಂಬರ್ ೫ ರಂದು ಶ್ರೀ ಕ್ಷೇತ್ರ ದೇವಗಡ ಇಲ್ಲಿ ಶ್ರೀದತ್ತ ಸಂಸ್ಥಾನಕ್ಕೆ ಭೇಟಿ ನೀಡಿದ್ದರು. ಆಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಾಗ ಡಾ. ಕರಾಡರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಸಚಿವ ಡಾ. ಕರಾಡ ಇವರು ಗುರುವರ್ಯ ಭಾಸ್ಕರ ಗಿರಿ ಮಹಾರಾಜ ಇವರ ದರ್ಶನವನ್ನು ಪಡೆದು ಅವರನ್ನು ಸತ್ಕರಿಸಿದರು.