ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ೪ ಸೈನಿಕರಿಗೆ ಗಾಯ

ಭಯೋತ್ಪಾದಕ ದಾಳಿಯಲ್ಲಿ ಇನ್ನೂ ಎಷ್ಟು ವರ್ಷ ಭಾರತೀಯ ಸೈನಿಕರು ಗಾಯಗೊಳ್ಳುವರು ? ಭಯೋತ್ಪಾದಕರನ್ನು ನಿರ್ನಾಮ ಮಾಡಲು, ಮೊದಲು ಅವರ ನಿರ್ಮಿತಿಯ ಕಾರ್ಖಾನೆಯಾದ ಪಾಕಿಸ್ತಾನವನ್ನೇ ನಾಶಮಾಡಿ !


ಶ್ರೀನಗರ: ಕುಲಗಾಮ್ ಜಿಲ್ಲೆಯ ಶಮ್ಸಿಪೋರಾದಲ್ಲಿ ಭಾರತೀಯ ಸೈನಿಕರ ‘ರೋಡ್ ಓಪನಿಂಗ್ ಪಾರ್ಟಿ’ (ಅತಿಗಣ್ಯ ವ್ಯಕ್ತಿಗಳು ಸೂಕ್ಷ್ಮ ಪ್ರದೇಶದಿಂದ ಪ್ರಯಾಣ ಮಾಡುತ್ತಿರುವಾಗ ಅವರ ಭದ್ರತೆಗಾಗಿ ನೇಮಿಸಿದ ಸೈನಿಕರ ದಂಡು) ಮೇಲೆ ಉಗ್ರರು ಗ್ರೆನೇಡ್ ದಾಳಿ ಮಾಡಿದರು.

ಈ ದಾಳಿಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ನಂತರ, ಸೈನ್ಯವು ಆ ಪ್ರದೇಶವನ್ನು ಸುತ್ತುವರಿದಿದ್ದು ಉಗ್ರರನ್ನು ಬಂಧಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.