ರಾಜಸ್ಥಾನದಲ್ಲಿ ಶ್ರೀ ಮಹಾದೇವ ಮಂದಿರದ ೭೫ ವರ್ಷದ ಸೇವಕನ ಬರ್ಬರ ಹತ್ಯೆ

ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂ ದೇವಾಲಯಗಳು ಮತ್ತು ಸೇವಕರು ಅಸುರಕ್ಷಿತರಾಗಿದ್ದಾರೆ ! ಮಸೀದಿಯ ಇಮಾಮ್ ಅಥವಾ ಚರ್ಚ್‌ನ ಪಾದ್ರಿಯ ವಿಷಯದಲ್ಲಿ ಇಂತಹ ಘಟನೆ ನಡೆದಿದ್ದರೆ, ಜಾತ್ಯತೀತವಾದಿಗಳು ಮತ್ತು ಪ್ರಗತಿ (ಅಧೋಗತಿ) ಪರರು ಆಕಾಶ-ಪಾತಾಳ ಒಂದು ಮಾಡುತ್ತಿದ್ದರು; ಆದರೆ, ಹತ್ಯೆಯಾಗಿರುವವರು ಹಿಂದೂ ಆಗಿರುವುದರಿಂದ ಇಲ್ಲಿ ಎಲ್ಲರೂ ಶಾಂತವಾಗಿದ್ದಾರೆ !

ಜೈಪುರ (ರಾಜಸ್ಥಾನ) – ಮೆಹ್ರಾ ಸಮುದಾಯದ ರಾಕೇಶ್ವರ ಮಹಾದೇವ ದೇವಾಲಯದ ೭೫ ವರ್ಷದ ವೃದ್ಧ ಸೇವಕ ಗಿರಿರಾಜ್ ಮೆಹ್ರಾ ಅವರನ್ನು ಇಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಬಾಯಿಗೆ ಬಟ್ಟೆ ಸುತ್ತಿ, ಕೈ- ಕಾಲು ಕಟ್ಟಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಜನವರಿ ೨೬ ರ ಬೆಳಗ್ಗೆ ಕೆಲವು ಮಹಿಳೆಯರು ಪೂಜೆಗೆ ದೇವಾಲಯಕ್ಕೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೆಲವು ಮದ್ಯವ್ಯಸನಿಗಳು ಬಂದು ದೇವಾಲಯದ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಗಿರಿರಾಜ್ ಮೆಹ್ರಾ ಅವರೊಂದಿಗಿನ ವಾಗ್ವಾದದಿಂದಾಗಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.