ಬೆಂಗಳೂರು ಗಲಭೆ ಪ್ರಕರಣದಲ್ಲಿ ಪರಾರಿಯಾಗಿದ್ದ ಕಾಂಗ್ರೆಸ್‌ನ ಮತಾಂಧ ನಾಯಕನ ಬಂಧನ

ಕಾಂಗ್ರೆಸ್ಸಿಗರು ಮತ್ತು ಅದರಲ್ಲಿಯೂ ಮತಾಂಧವಾಗಿದ್ದಲ್ಲಿ ಹಿಂದೂ ವಿರೋಧಿ ಕಾರ್ಯಾಚರಣೆ ಮಾಡುತ್ತಾರೆ, ಎಂದು ಹಿಂದೂಗಳಿಗೆ ಅನಿಸುತ್ತದೆ !

ಬೆಂಗಳೂರು – ಈ ವರ್ಷ ಆಗಸ್ಟ್ ೧೧ ರಂದು ಮತಾಂಧರು ನಡೆಸಿದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಕಾಂಗ್ರೆಸ್ ಮುಖಂಡ ರಕೀಬ್ ಜಾಕಿರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಕಾಂಗ್ರೆಸ್‌ನ ಎರಡನೇ ಮಾಜಿ ಕಾರ್ಪೊರೇಟರ್. ಈ ಹಿಂದೆ ಕಾಂಗ್ರೆಸ್‌ನ ಮಾಜಿ ಕಾರ್ಪೋರೇಟರ್ ಆಗಿದ್ದ ಸಂಪತ್ ರಾಜ್ ಅವರನ್ನು ಬಂಧಿಸಲಾಗಿತ್ತು.