ಉತ್ತರಾಖಂಡ ಸರಕಾರದ ಪ್ರಶಂಸನೀಯ ನಿರ್ಧಾರ !
ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಬಿಜೆಪಿ ಸರಕಾರ ಅಂತರ್ಧರ್ಮೀಯ ಮದುವೆಯಾಗುವ ದಂಪತಿಗಳಿಗೆ ಪ್ರೋತ್ಸಾಹಧನವಾಗಿ ೫೦ ಸಾವಿರ ರೂಪಾಯಿ ನೀಡುವ ಯೋಜನೆಯನ್ನು ಹಿಂತೆಗೆದುಕೊಳ್ಳಲಿದೆ. ಹಿಂದೂಗಳ ವ್ಯಾಪಕ ಟೀಕೆಗಳಿಂದಾಗಿ ಈಗ ಈ ಯೋಜನೆಯನ್ನು ಅಂತರ್ಜಾತಿ ದಂಪತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂತರ್ಧರ್ಮೀಯ ವಿವಾಹದ ದಂಪತಿಗಳಿಗೆ ಇದರ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಹ ರಾವತ ಘೋಷಿಸಿದರು. ಅದೇ ರೀತಿ ‘ಮೇಲಿನ ಆದೇಶ ಹೊರಡಿಸಿದವರ ವಿಚಾರಣೆ ಮಾಡಲಾಗುವುದು’, ಎಂದೂ ಕೂಡ ಅವರು ಹೇಳಿದರು. ಈ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಇದಕ್ಕೂ ಮೊದಲು ೧೦,೦೦೦ ರೂಪಾಯಿ ನೀಡಲಾಗುತ್ತಿತ್ತು.
Uttarakhand mulls ending scheme that gives Rs 50k for inter-faith marriages https://t.co/0iQKes1Ok4
— TOI India (@TOIIndiaNews) November 30, 2020
ಉತ್ತರಾಖಂಡ ಸರಕಾರವು ೨೦೧೮ ರಲ್ಲಿ ಧರ್ಮ ಸ್ವಾತಂತ್ರ್ಯ ಕಾಯ್ದೆಯನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ಅಕ್ರಮ ಮತಾಂತರವನ್ನು ನಿಷೇಧಿಸಲಾಗಿತ್ತು. ‘ಮೇಲಿನ ಯೋಜನೆ ಮತ್ತು ಈ ಕಾನೂನು ವಿರೋಧಾಭಾಸವಾಗಿದೆ’ ಎಂದು ಹಿಂದೂ ಸಂಘಟನೆಗಳು ಮುಖ್ಯಮಂತ್ರಿಯ ಗಮನಕ್ಕೆ ತಂದುಕೊಟ್ಟರು. ಅದೇರೀತಿ ‘ಮೇಲಿನ ಯೋಜನೆಯನ್ನು ಅನುಷ್ಠಾನಗೊಳಿಸುವುದು ಅಂದರೆ ‘ಲವ್ ಜಿಹಾದ್’ ಅನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ’, ಎಂದು ಸಹ ಹೇಳಿದ್ದರು.

ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!