ಹಿಂದೂಗಳ ವಿರೋಧದ ನಂತರ, ‘ಜೆನೀಶ್ ಮಸಾಲೆ’ ತಯಾರಿಸುವ ಸಂಸ್ಥೆಯು ರಾಮಾಯಣವನ್ನು ಅವಮಾನಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಅಳಿಸಿದೆ !

  • ಈ ಯಶಸ್ಸಿಗೆ ಹಿಂದೂಗಳು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸೋಣ !

  • ಇಂದು ಹಿಂದೂ ದೇವಿ – ದೇವತೆಗಳನ್ನು ಜಾಹೀರಾತು, ಚಲನಚಿತ್ರ, ವೆಬ್ ಸರಣಿಗಳು ಇತ್ಯಾದಿಗಳ ಮೂಲಕ ಪ್ರತಿದಿನವೂ ವಿಡಂಬನೆ ಮಾಡಲಾಗುತ್ತದೆ. ವಿಡಂಬನೆ ಮಾಡುವ ಸಂಸ್ಥೆಗಳ ದೃಷ್ಟಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳ ಮೌಲ್ಯವು ಶೂನ್ಯವಾಗಿದೆ. ಇದಕ್ಕಾಗಿ ಕೇಂದ್ರ ಸರಕಾರ ನೇತೃತ್ವವಹಿಸಿ ವಿಡಂಬನೆಯನ್ನು ಮಾಡುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕೆಂದು ಹಿಂದೂಗಳಿಗೆ ಅಪೇಕ್ಷಿತವಿದೆ.

ಮುಂಬಯಿ – ಗುಜರಾತ್‌ನಲ್ಲಿ ‘ಜೆನೀಶ್ ಮಸಾಲೆ’ ತಯಾರಿಸುವ ಸಂಸ್ಥೆಯು ಪ್ರಸಿದ್ಧಿಗಾಗಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಅನ್ನು ಮಾಡಿತ್ತು. ಅದರಲ್ಲಿ ರಾಮಾಯಣದ ಪ್ರಸಂಗ ಒಂದನ್ನು ತೋರಿಸಲಾಗಿದೆ. ಅದರಲ್ಲಿ ‘ಯಾವಾಗ ನಿಮ್ಮ ಸ್ನೇಹಿತ ‘ಯಾವುದೇ ಮಸಾಲೆ ಹಾಕು, ಏನು ವ್ಯತ್ಯಾಸ ಆಗುತ್ತದೆ?’ ಎಂದು ಹೇಳುತ್ತಾನೆ, ಅದಕ್ಕೆ ಶ್ರೀರಾಮನ ಭಕ್ತ ಹೇಳುತ್ತಾರೆ, ‘ಆತನ ಹೊಟ್ಟೆಗೆ ಬಾಣ ಬಿಡಿ ಪ್ರಭು.’

ಈ ಪೋಸ್ಟ ಬಗ್ಗೆ ಧರ್ಮಾಭಿಮಾನಿಗಳು ಹಿಂದೂ ಜನಜಾಗೃತಿ ಸಮಿತಿಗೆ ತಿಳಿಸಿದಾಗ ಸಮಿತಿಯು ನ್ಯಾಯೋಚಿತ ಮಾರ್ಗದಲ್ಲಿ ವಿರೋಧಿಸಲು ಹಿಂದೂಗಳಿಗೆ ಕರೆ ನೀಡಿತ್ತು. ಹಿಂದೂಗಳು ಸಂಘಟಿತರಾಗಿ ವಿರೋಧಿಸಿದ ನಂತರ ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ಅನ್ನು ಅಳಿಸಲಾಯಿತು.