ಹಲವು ಸೌಲಭ್ಯಗಳನ್ನು ಹೊಂದಿರುವ ಈ ರೈಲು ಜಿಂದ್ ನಿಂದ ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದೆ

ಸೋನಿಪತ (ಹರಿಯಾಣ) – ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲು ಹರಿಯಾಣದ ಜಿಂದ್ ನಿಂದ ಸೋನಿಪತ್ ಮಾರ್ಗದಲ್ಲಿ ಸಂಚರಿಸಲು ಸಂಪೂರ್ಣವಾಗಿ ಸಜ್ಜಾಗಿದೆ. ಈ ಉಪಕ್ರಮದ ಮೂಲಕ ಭಾರತೀಯ ರೈಲ್ವೆಯು ಹಸಿರು ಊರ್ಜೆಯ ದಿಕ್ಕಿನಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಈ ರೈಲಿನ ಕ್ಷಣಚಿತ್ರವನ್ನು ಹರಿಯಾಣದ ಮುಖ್ಯಮಂತ್ರಿ ನಾಯಬ್ ಸೈನಿ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವೀಡಿಯೊದ ಮೂಲಕ ಹಂಚಿ ಕೊಂಡಿದ್ದಾರೆ. ಈ ವೀಡಿಯೊದಲ್ಲಿ ಹೈಡ್ರೋಜನ್ ರೈಲು ಹರಿಯಾಣದ ಹೆಮ್ಮೆಯಾಗಿದ್ದು, ಶೀಘ್ರದಲ್ಲೇ ಇದರ ನಿಯಮಿತ ಸಂಚಾರ ಪ್ರಾರಂಭವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಶಬ್ದರಹಿತ ಮತ್ತು ಮಾಲಿನ್ಯಮುಕ್ತ ಪ್ರಯಾಣ
ಈ ರೈಲಿನ ವಿಶೇಷತೆಯೆಂದರೆ ಇದು ಸಂಪೂರ್ಣವ ಶಾಂತವಾಗಿ ಸಂಚರಿಸಲಿದ್ದು, ಇದರಿಂದ ಶಬ್ದ ಮಾಲಿನ್ಯವು ಬಹುತೇಕ ಶೂನ್ಯವಾಗಿರಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ರೈಲು ಒಂದು ಬಾರಿಗೆ ಅಂದಾಜು 2 ಸಾವಿರದ 600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ರೈಲ್ವೆ ಆಡಳಿತ ಮಂಡಳಿಯ ಮಾಹಿತಿಯ ಪ್ರಕಾರ, ನಿಯಮಿತ ಸೇವೆಗೆ ತರುವ ಮೊದಲು ಇದರ ಅಂತಿಮ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಯ ಸಮಯದಲ್ಲಿ ತಾಂತ್ರಿಕ ಅಂಶಗಳು, ಸುರಕ್ಷತಾ ಮಾನದಂಡಗಳು ಮತ್ತು ವೇಗವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಗುರುಗ್ರಾಮದ ಪ್ರಯೋಗಾಲಯದಲ್ಲಿ ಅನಿಲದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಪ್ರಾಯೋಗಿಕ ಸಂಚಾರ ನಡೆಯಲಿದೆ. ಸದ್ಯಕ್ಕೆ ಇದರ ನಿಖರವಾದ ದಿನಾಂಕ ನಿಗದಿಯಾಗಿಲ್ಲ.
ವೇಗ ಮತ್ತು ದಕ್ಷತೆ
ಹೈಡ್ರೋಜನ್ ರೈಲು ಪ್ರತಿ ಗಂಟೆಗೆ 110 ರಿಂದ 140 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಈ ರೈಲು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಸಮಯವನ್ನೂ ಉಳಿಸಲಿದೆ. ಮುಂಬರುವ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೈಡ್ರೋಜನ್ ರೈಲು ಜಾಲವನ್ನು ವಿಸ್ತರಿಸುವುದು ಸರಕಾರ ಮತ್ತು ರೈಲ್ವೆ ಆಡಳಿತದ ಗುರಿಯಾಗಿದೆ.
ಭಾರತ ಹೈಡ್ರೋಜನ್ ರೈಲು ಹೊಂದಿರುವ ವಿಶ್ವದ ಆರನೇ ರಾಷ್ಟ್ರವಾಗಲಿದೆಭಾರತ ಹೈಡ್ರೋಜನ್ ರೈಲು ಹೊಂದಿರುವ ವಿಶ್ವದ ಆರನೇ ದೇಶವಾಗಿ ಶೀಘ್ರದಲ್ಲೇ ಹೊರಹೊಮ್ಮಲಿದೆ. ಈ ಕ್ಷೇತ್ರದಲ್ಲಿ ಜರ್ಮನಿಯು ಮೊದಲು 2018 ರಲ್ಲಿ ಹೈಡ್ರೋಜನ್ ಚಾಲಿತ ರೈಲನ್ನು ಪ್ರಾರಂಭಿಸಿತು. ನಂತರ ಚೀನಾ (2022), ಜಪಾನ್ (2022), ಕೆನಡಾ (2023), ಅಮೇರಿಕಾ (2025) ದೇಶಗಳು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಹೈಡ್ರೋಜನ್ ರೈಲುಗಳನ್ನು ಚಾಲನೆಗೆ ತಂದಿವೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ