Murder of 2 Hindu Children : ಸಾಜಿದ ಮತ್ತು ಸಹೋದರ ನಾವೇದ ಇವರೇ ಕೊಲೆಗಾರರು; ಆರೋಪಪಟ್ಟಿ ಸಲ್ಲಿಕೆ !

  • ಬದಾಯುನಲ್ಲಿ ಇಬ್ಬರು ಹಿಂದೂ ಮಕ್ಕಳ ಕೊಲೆ ಪ್ರಕರಣ

  • ಪೊಲೀಸರು ಸಾಜಿದನನ್ನು ಘರ್ಷಣೆಯಲ್ಲಿ ಹತ್ಯೆ ಮಾಡಿದ್ದರು !

ಬದಾಯು (ಉತ್ತರ ಪ್ರದೇಶ) – ಇಲ್ಲಿನ ಬಾಬಾ ಕಾಲೋನಿಯಲ್ಲಿ ಮಾರ್ಚ್ 19 ರಂದು ಆಯುಷ ಮತ್ತು ಅಹಾನ ಈ ಇಬ್ಬರು ಅಮಾಯಕರ ಸಹೋದರರನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಸಾಜಿದ್ ಮತ್ತು ಆತನ ಸಹೋದರ ಜಾವೇದ ಇವರಿಬ್ಬರೂ ಸೇರಿ ಮಕ್ಕಳ ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ. ಆರಂಭದಲ್ಲಿ ಸಾಜಿದ ಒಬ್ಬನೇ ಹತ್ಯೆ ಮಾಡಿದ್ದ ಎಂದು ಹೇಳಲಾಗುತ್ತಿತ್ತು. ಪೊಲೀಸರು ಸಾಜಿದನನ್ನು ಘರ್ಷಣೆಯಲ್ಲಿ ಹತ್ಯೆ ಮಾಡಿದ್ದರು.

1. ಆರೋಪಪಟ್ಟಿಯಲ್ಲಿ ಇಬ್ಬರೂ ಆರೋಪಿಗಳು ಸಾಲವೆಂದು 5 ಸಾವಿರ ರೂಪಾಯಿಗಳನ್ನು ಕೋರುವ ನೆಪದಲ್ಲಿ ವಿನೋದ ಕುಮಾರ ಅವರ ಕ್ಷೌರಿಕ ಅಂಗಡಿಯ ಎದುರಿಗೆ ಇರುವ ಮನೆಗೆ ಹೋಗಿದ್ದರು. ವಿನೋದ ಅವರ ಹೆಂಡತಿಯು ಹಣ ನೀಡಲು ನಿರಾಕರಿಸಿದ್ದರಿಂದ ಅವರು ಕೊಲೆ ಮಾಡಿದರು.

2. ಮಕ್ಕಳ ಅಜ್ಜಿ ಮುನ್ನಿ ದೇವಿಯು ಪೊಲೀಸರಿಗೆ, ಹಣ ಕೇಳುವ ನೆಪದಲ್ಲಿ ಸಾಜಿದ್ ಮತ್ತು ಜಾವೇದ್ ಮನೆಗೆ ನುಗ್ಗಿದ್ದರು. ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅವರು ಇಬ್ಬರೂ ಮಕ್ಕಳ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೇ ಪ್ರಮುಖ ಸಾಕ್ಷಿ ಎಂದು ಪೊಲೀಸರು ಪರಿಗಣಿಸಿದ್ದಾರೆ. ಆರೋಪಿಗಳ ಮೊಬೈಲ ಲೊಕೇಶನನಿಂದ ಅವರು ಘಟನೆ ನಡೆದ ಸ್ಥಳದಲ್ಲಿದ್ದರು ಎಂದು ಸ್ಪಷ್ಟವಾಗಿತ್ತು.