‘ಪುಷ್ಪ 2’ ಸಿನಿಮಾದಲ್ಲಿ ಮದ್ಯ ಮತ್ತು ತಂಬಾಕುಗಳ ಜಾಹೀರಾತು ನೀಡಲು ನಟ ಅಲ್ಲು ಅರ್ಜುನ್ ನಿರಾಕರಣೆ !

ಅಭಿಮಾನಿಗಳು ಕೆಟ್ಟ ಅಭ್ಯಾಸಗಳಿಗೆ ಒಳಗಾಗಬಾರದು; ಹಾಗಾಗಿ ಅಲ್ಲು ಅರ್ಜುನ್ ಮದ್ಯ, ತಂಬಾಕು ಮತ್ತು ಗುಟ್ಕಾಗಳ ಜಾಹೀರಾತು ನೀಡುವುದಿಲ್ಲ !

ಮುಂಬಯಿ – ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಅವರು ಜನಪ್ರಿಯ ಮದ್ಯ ಮತ್ತು ಪಾನ್ ಮಸಾಲಾ ಕಂಪನಿಯಲ್ಲಿ ಜಾಹೀರಾತು ನೀಡಲು ನಿರಾಕರಿಸಿದ್ದಾರೆ. ಅಲ್ಲು ಅರ್ಜುನ್ ಯಾವಾಗಲೂ ತಂಬಾಕು, ಗುಟ್ಕಾ ಮತ್ತು ಮದ್ಯದ ಜಾಹೀರಾತುಗಳಿಂದ ದೂರವಿರುತ್ತಾರೆ. ಈ ವರದಿಯ ಪ್ರಕಾರ, ಮುಂಬರುವ ‘ಪುಷ್ಪ 2’ ಸಿನೆಮಾದಲ್ಲಿ ಪುಷ್ಪರಾಜ ಪಾತ್ರವು ಮದ್ಯ ಅಥವಾ ತಂಬಾಕು ಸೇವಿಸಿದಾಗಲೆಲ್ಲಾ ಈ ಕಂಪನಿಯ ಲೋಗೋವನ್ನು ಎಲ್ಲರೂ ನೋಡುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಪ್ರಸ್ತಾಪಿಸಲಾಗಿತ್ತು. ಅದಕ್ಕೆ 10 ಕೋಟಿ ರೂಪಾಯಿ ನೀಡುವವರಿದ್ದರು; ಆದರೆ ಅದನ್ನು ನಟ ಅಲ್ಲು ಅರ್ಜುನ್ ನಿರಾಕರಿಸಿದ್ದಾರೆ.

ಅಂತಹ ಒಂದು ಉತ್ಪನ್ನವನ್ನು ಜಾಹೀರಾತು ಮಾಡಲು ಅಲ್ಲು ಅರ್ಜುನ್ ನಿರಾಕರಿಸಿದ್ದರು. ಅಲ್ಲು ಅರ್ಜುನ್ ತಂಬಾಕು ಸೇವಿಸುದಿಲ್ಲ ಮತ್ತು ಅವರ ಅಭಿಮಾನಿಗಳು ಅದೇ ರೀತಿ ಮಾಡಬೇಕೆಂದು ಅವರು ಬಯಸುವುದಿಲ್ಲ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂದು ಭಾರತದಲ್ಲಿ ಇಂತಹ ಬಹುಕೋಟಿ ಜಾಹೀರಾತುಗಳನ್ನು ನಿರಾಕರಿಸುವ ಎಷ್ಟು ನಟರು, ಕ್ರೀಡಾಪಟುಗಳು ಅಥವಾ ಸೆಲೆಬ್ರಿಟಿಗಳು ಇದ್ದಾರೆ ?