ಪ್ರಖರ ಹಿಂದುತ್ವನಿಷ್ಠ ಡಿ.ಕೆ. ಪ್ರಕಾಶ ಇವರ ಸತ್ಕಾರ !

ರಾಷ್ಟ್ರೀಯ ಸಸ್ಯಾಹಾರಿ ಬಾಡಿಬಿಲ್ಡರ್ ಮತ್ತು ಕಟ್ಟಾ ಹಿಂದುತ್ವ ಮನೋಭಾವದ ಡಿ.ಕೆ. ಪ್ರಕಾಶ್ ಭಾರದ್ವಾಜ್ ಗೆ ಸನ್ಮಾನ

ಬೆಂಗಳೂರು – ದಿನಾಂಕ 01.07.2023 ರಂದು KDMA , MLAC & Dr.NBJ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವೈದ್ಯ ದಿನಾಚರಣೆಯನ್ನು ಮತ್ತು ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯರಾದ ಶ್ರೀ ಜೆ.ಸಿ. ಚಂದ್ರಶೇಖರ್ ನೆರವೇರಿಸಿದರು. ಅಬಲಾಶ್ರಮದ ಅಧ್ಯಕ್ಷೆ ಮತ್ತು ಕಿದ್ವಾಯಿ ಆಸ್ಪತ್ರೆಯ ಮಾಜಿ ನಿರ್ದೇಶಕಿರಾದ ಪ್ರಸಿದ್ಧ ಆಂಕೋಲಜಿ ತಜ್ಞೆ ವೈದ್ಯರಾದ ಡಾಕ್ಟರ್ ವಿಜಯಲಕ್ಷ್ಮಿ ದೇಶಮನೆ, ವಿಜಯ ಕರ್ನಾಟಕದ ಪ್ರಸಾದ್ ನಾಯ್ಡು , ಟಿವಿ9 ನ ಡಾ. ಭಾಸ್ಕರ್ ಹೆಗಡೆ ಇತರ ಗಣ್ಯರು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಸಸ್ಯಹಾರಿ ದೇಹಧಾರ್ಢ್ಯ ಪಟು ಹಾಗೂ ಪ್ರಖರ ಹಿಂದುತ್ವನಿಷ್ಠ ಬಿ.ಕೆ. ಪ್ರಕಾಶ ಭಾರಧ್ವಾಜ ಇವರ ಸತ್ಕಾರ ಮಾಡಲಾಯಿತು.