ರಾಜ್ಯದಲ್ಲಿ ರಾ.ಸ್ವ. ಸಂಘಕ್ಕೆ ನೀಡಿರುವ ನೂರಾರು ಎಕರೆ ಭೂಮಿಯನ್ನು ಪರಿಶೀಲಿಸಲಾಗುವುದು ! – ಕಾಂಗ್ರೆಸ್ ಸರಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್

ಬೆಂಗಳೂರು – ರಾಜ್ಯದಲ್ಲಿ ಭಾಜಪ ಸರಕಾರವಿದ್ದಾಗ ರಾ.ಸ್ವ.ಸಂಘ ಮತ್ತು ಅದಕ್ಕೆ ಸಂಬಂದಿಸಿದ ಇತರೆ ಸಂಘಟನೆಗಳಿಗೆ ಮಂಜೂರಾದ ನೂರಾರು ಎಕರೆ ಸರಕಾರಿ ಭೂಮಿಯನ್ನು ಪರಿಶೀಲಿಸಲಾಗುವುದು, ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು, ಹಾಗೆಯೇ ಭಾಜಪಾ ಸರಕಾರದ ಅವಧಿಯಲ್ಲಿನ ಕೆಲವು ಟೆಂಡರ್‌ಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ಹೇಳಿದರು.