ಬೆಂಗಳೂರಿನ ಭಾಜಪದ ಕಚೇರಿಯ ಹೊರಗೆ ನಡೆದ ಬಾಂಬ್ ಸ್ಫೋಟದ ಪ್ರಕರಣದ ಆತೋಪಿಗಳಿಗೆ ೭ ವರ್ಷದ ಜೈಲು ಶಿಕ್ಷೆ

ಬೆಂಗಳೂರು – ಏಪ್ರಿಲ್ ೧೭, ೨೦೧೩ ರಂದು ಇಲ್ಲಿಯ ಭಾಜಪದ ಕಚೇರಿಯ ಹೊರಗೆ ನಡೆದಿದ್ದ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಡ್ಯಾನಿಯಲ್ ಪ್ರಕಾಶ ಮತ್ತು ಸಯ್ಯದ್ ಅಲಿ ಇವರಿಬ್ಬರಿಗೂ ೭ ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಅವರಿಗೆ ೫೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ಡ್ಯಾನಿಯಲ್ ಇವನು ತಮಿಳುನಾಡಿನ ತಿರುನೆಲವೆಲ್ಲಿಯ ನಿವಾಸಿಯಾಗಿದ್ದಾನೆ. ಈ ಬಾಂಬ್ ಸ್ಫೋಟದಲ್ಲಿ ೧೨ ಪೊಲೀಸರು ಮತ್ತು ೬ ನಾಗರಿಕರು ಗಾಯಗೊಂಡಿದ್ದರು ಹಾಗೂ ಕೆಲವು ವಾಹನಗಳಿಗೆ ಕೂಡ ಹಾನಿ ಉಂಟಾಗಿತ್ತು.