ಇಸ್ಲಾಂ ಬಿಟ್ಟು ಹಿಂದೂ ಧರ್ಮವನ್ನು ಸ್ವೀಕಾರ ಮಾಡಿದ ಕುಟುಂಬವನ್ನು ಜೀವಂತವಾಗಿ ಸುಡುವ ಪ್ರಯತ್ನ !

  • ಸರ್ವಧರ್ಮ ಸಮಭಾವ ಹಾಗೂ ಜಾತ್ಯತೀತದ ಜ್ಞಾನವನ್ನು ಮತಾಂಧರಿಗೆ ಕಲಿಸದೇ ಇದ್ದರಿಂದ ಅವರು ಇಂತಹ ಕೃತ್ಯಗಳನ್ನು ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! 
  • ಇಷ್ಟು ದೊಡ್ಡ ಘಟನೆ ನಡೆದರೂ ಕಾಂಗ್ರೆಸ್, ಕಮ್ಯುನಿಸ್ಟ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಹಾಗೂ ಜಾತ್ಯತೀತ ಸಂಘಟನೆಗಳು ಬಾಯಿ ತೆರೆದಿಲ್ಲ ! 
  • ಇಂತಹ ಘಟನೆಗಳು ಅಪ್ಪಿ-ತಪ್ಪಿ ಹಿಂದೂಗಳಿಂದ ನಡೆದಿದ್ದರೆ, ಹಿಂದೂಗಳನ್ನು ‘ತಾಲಿಬಾನ್’, ‘ಸನಾತಾನಿ’ ಹೇಳಿ ಅವರು ಯಾವ ಸಂಘಟನೆಯಲ್ಲಿ ಇದ್ದಾರೆ, ಅದರ ಮೇಲೆ ನಿಷೇಧ ಹೇರುವಂತೆ ಬೇಡಿಕೆ ಮಾಡುತ್ತಿದ್ದರು ! 
  • ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಇರುವಾಗ ಇಂತಹ ಘಟನೆಗಳು ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಎಡಗಡೆಯಿಂದ ದೇವಪ್ರಕಾಶ ಪಟೇಲ್ ಮತ್ತು ಬಂಧಿಸಲಾದ ಆರೋಪಿಗಳು

ರಾಯಬರೇಲಿ (ಉತ್ತರ ಪ್ರದೇಶ) – ಸಲೋನ್ ಪ್ರದೇಶದ ರತಾಸೊ ಗ್ರಾಮದ ನಿವಾಸಿ ಮೊಹಮ್ಮದ್ ಅನ್ವರ್ ಅವರು ೨೦೨೦ ರ ಸೆಪ್ಟೆಂಬರ್‌ನಲ್ಲಿ ಸ್ವೇಚ್ಛೆಯಿಂದ ಇಸ್ಲಾಮನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕಾರಿಸಿದ್ದರು. ಅವರು ‘ದೇವ ಪ್ರಕಾಶ ಪಟೇಲ್’ ಎಂದು ಹೆಸರಿಟ್ಟುಕೊಂಡಿದ್ದರು. ಅದರ ನಂತರ ಅವರು ತಮ್ಮ ಜಮೀನಿನಲ್ಲಿ ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸಿದರು. ಇದನ್ನು ಅರಿತ ಮತಾಂಧ ಸರ್ಪಂಚ ಮತ್ತು ಅವನ ಸಹಚರರು ದೇವ ಪ್ರಕಾಶ ಪಟೇಲ್ ಮತ್ತು ಅವರ ಮೂವರು ಮಕ್ಕಳು ಮಲಗಿದ್ದಾಗ ಮನೆಯ ಬಾಗಿಲನ್ನು ಹೊರಗಿನಿಂದ ಬೀಗ ಹಾಕಿ, ಮನೆಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಡಲು ಪ್ರಯತ್ನಿಸಿದರು. ಈ ಸಮಯದಲ್ಲಿ, ದೇವ ಪ್ರಕಾಶ ಪಟೇಲ್ ಹಿಂದಿನ ಬಾಗಿಲನ್ನು ಮುರಿದು ತಮ್ಮ ಮತ್ತು ಮಕ್ಕಳ ಪ್ರಾಣವನ್ನು ಉಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಸರ್ಪಂಚ ತಾಹಿರ್, ರೆಹಾನ್ ಅಲಿಯಾಸ್ ಸೋನು, ಅಲಿ ಅಹಮದ್, ಇಮ್ತಿಯಾಜ್ ಮತ್ತು ಇತರರು ಸೇರಿ ಸ್ಥಳೀಯ ಮದರಸಾದ ಕೆಲವು ಜನರ ವಿರುದ್ಧ ಅಪರಾಧವನ್ನು ದಾಖಲಿಸಿ ಅವರಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ದೇವ ಪ್ರಕಾಶ ಪಟೇಲ್ ತಮ್ಮ ಜಮೀನಿನಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದು, ಮತಾಂಧರಿಗೆ ಆಕ್ರೋಶವಿತ್ತು. ಆದ್ದರಿಂದಲೇ ಅವರು ದೇವ ಪ್ರಕಾಶ ಪಟೇಲ್ ಅವರನ್ನು ಕೊಲ್ಲಲು ಪ್ರಯತ್ನಿಸಿದರು. ಈ ಘಟನೆಯ ನಂತರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ದೇವ ಪ್ರಕಾಶ ಪಟೇಲ್ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಅದೇರೀತಿ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಕಾರ್ಯಕರ್ತರೂ ಸಹ ಅವರನ್ನು ಭೇಟಿ ಮಾಡಿದರು.