ಉತ್ತರ ಪ್ರದೇಶದಲ್ಲಿ ಒಂದು ತಿಂಗಳಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನಿನಡಿಯಲ್ಲಿ ೩೫ ಜನರ ಬಂಧನ !

ಒಂದೇ ರಾಜ್ಯದಲ್ಲಿ ಕೇವಲ ಒಂದು ತಿಂಗಳಲ್ಲಿ ೩೫ ಜನರನ್ನು ಬಂಧಿಸಲಾಗುತ್ತದೆ, ಅಂದರೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಈ ಜಾಲ ಹರಡಿದೆ, ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಕಾನೂನನ್ನು ರಾಷ್ಟ್ರೀಯ ಮಟ್ಟದಲ್ಲಿ ಆದಷ್ಟು ಬೇಗ ಜಾರಿಗೆ ತರುವ ಮೂಲಕ ಕೇಂದ್ರ ಸರಕಾರ ಹಿಂದೂ ಯುವತಿಯರಿಗೆ ನ್ಯಾಯ ಒದಗಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನವೆಂಬರ್ ೨೭ ರಂದು ರಾಜ್ಯದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಬಂದಾಗಿನಿಂದ, ಇಲ್ಲಿಯವರೆಗೆ ಪೊಲೀಸರು ಒಂದು ತಿಂಗಳಲ್ಲಿಯೇ ೧೨ ಪ್ರಕರಣಗಳನ್ನು ದಾಖಲಿಸಿದ್ದು, ೩೫ ಜನರನ್ನು ಬಂಧಿಸಿದ್ದಾರೆ.

ಸೀತಾಪುರ, ಗ್ರೇಟರ್ ನೋಯ್ಡಾ, ಶಾಹಜಹಾನಪುರ್, ಅಜಮ್‌ಗಡ, ಮುರಾದಾಬಾದ್, ಮುಜಫ್ಫರನಗರ, ಬಿಜನೌರ್, ಕನ್ನೌಜ್, ಬರೇಲಿ ಮತ್ತು ಹರದೊಯಿ ಈ ಸ್ಥಳಗಳಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.