ಉಜ್ಜೈನಿನಲ್ಲಿ ಹಿಂದುತ್ವನಿಷ್ಠರ ಮೇಲೆ ಕಲ್ಲೆಸೆದ ಮತಾಂಧರ ಅಕ್ರಮ ಮನೆಗಳು ನಗರ ಪಾಲಿಕೆಯಿಂದ ನೆಲಸಮ !

ಈ ಮನೆ ಕಟ್ಟುವವರೆಗೂ ಪೊಲೀಸ್ ಮತ್ತು ಪಾಲಿಕೆಯ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದರೆ ? ಒಂದು ವೇಳೆ ಮನೆಯಿಂದ ಕಲ್ಲು ಎಸೆಯದೇ ಇರುತ್ತಿದ್ದರೆ ಪೊಲೀಸರು ಮತ್ತು ಪಾಲಿಕೆಯ ಇಂತಹ ಕ್ರಮ ಕೈಗೊಳ್ಳುತ್ತಿರಲಿಲ್ಲ ! ಅಕ್ರಮ ಮನೆಗಳನ್ನು ನಿರ್ಲಕ್ಷಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು !

ಬೇಗಂಬಾಗ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಯ ಮೇಲೆ ಕ್ರಮ ಕೈಗೊಳ್ಳುತ್ತಿರುವ ಪುರಸಭೆಯ ಸಿಬ್ಬಂದಿಗಳು

ಉಜ್ಜೈನ (ಮಧ್ಯಪ್ರದೇಶ) – ಸ್ಥಳಿಯ ಹಿಂದುತ್ವನಿಷ್ಠ ಸಂಘಟನೆಗಳು ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಅರ್ಪಣೆ ಸಂಗ್ರಹಿಸಲು ಒಂದು ಮೆರವಣಿಗೆಯನ್ನು ನಡೆಸಿದ್ದರು. ಮೆರವಣಿಕೆ ಮುಸ್ಲಿಂ ಬಹುಸಂಖ್ಯಾತ ಬೇಗುಂಬಾಗ್ ಪ್ರದೇಶದಲ್ಲಿ ಸಾಗುತ್ತಿದ್ದಾಗ ಇವರ ಮೇಲೆ ಕಲ್ಲು ತೂರಾಟ ಮಾಡಲಾಯಿತು ಮತ್ತು ಕೆಲವು ವಾಹನಗಳನ್ನು ಧ್ವಂಸಗೊಳಿಸಲಾಯಿತು.

ಘಟನೆಯ ನಂತರ, ಪೊಲೀಸರು ಮತ್ತು ಪಾಲಿಕೆಯ ಸಿಬ್ಬಂದಿಗಳು ಯಾವ ಮನೆಯ ಮಹಡಿಯಿಂದ ಮಹಿಳೆಯರು ಮತ್ತು ಮಕ್ಕಳು ಕಲ್ಲುಗಳನ್ನು ಎಸೆದರೋ, ಆ ಮನೆಯನ್ನು ನೆಲಸಮ ಮಾಡಿದರು. ಈ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ.