ಬೆಂಗಳೂರಿನ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಷರೀಫ್‌ನ ಬಂಧನ

ಬೆಂಗಳೂರು – ನಗರದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.) ಮುಜಮ್ಮಿಲ್ ಷರೀಫ್ ನನ್ನು ಬಂಧಿಸಿದೆ. ಅವನು ಇತರ ಆರೋಪಿಗಳಿಗೆ ಸ್ಫೋಟಕ್ಕೆ ಬೇಕಾದ ಸಾಮಗ್ರಿಗಳನ್ನು ಪೂರೈಸಿದ್ದನು. ಅವನನ್ನು ಬಂಧಿಸುವುದಕ್ಕಾಗಿ ೩ ರಾಜ್ಯಗಳ ೧೮ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.ಎನ್.ಐ.ಎ. ಸದ್ಯ ಈ ಪ್ರಕರಣದಲ್ಲಿ ಮುಸಾವ್ವೀರ್ ಶಾಜೆಬ್ ಮತ್ತು ಅಬ್ದುಲ್ ಮತೀನ್ ತಾಹ ಈ ಇಬ್ಬರು ಆರೋಪಿಗಳನ್ನು ಹುಡುಕುತ್ತಿದೆ.