ದಲಿತರಿಗಾಗಿ ಸರಕಾರಿ ಕ್ಷೌರದಂಗಡಿ ತೆರೆಯಬೇಕು !

ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಶಿಫಾರಸ್ಸು

ರೋಗಕ್ಕಿಂತ ಮದ್ದು ಭಯಂಕರ ! ಇದರಿಂದ ಜಾತಿಮತ ದೂರವಾಗುವ ಬದಲು ಹೆಚ್ಚಾಗುತ್ತದೆ ! ಸ್ವಾತಂತ್ರ್ಯದ ೭೨ ವರ್ಷಗಳಲ್ಲಿ ದೇಶದಲ್ಲಿ ಜಾತಿ ಮತ ನಿರ್ಮೂಲನೆ ಮಾಡದಿರಲು ಇಲ್ಲಿಯವರೆಗಿನ ಆಡಳಿತಗಾರರು ಕಾರಣಕರ್ತರು !

ಸರಕಾರಿ ಕ್ಷೌರದಂಗಡಿಯನ್ನು ತೆರೆಯುವ ಬದಲು, ಸಮಾಜದಲ್ಲಿ ಜಾತಿ ಭೇದ ನಿರ್ಮೂಲನೆ ಮಾಡಲು ಸರಕಾರ ಪ್ರಯತ್ನ ಮಾಡಬೇಕು; ಆದರೆ ಮತಕ್ಕಾಗಿ ಜಾತಿಭೇದವನ್ನು ಉದ್ದೇಶಪೂರ್ವಕವಾಗಿ ಕಾಪಾಡಿಕೊಳ್ಳುವ ರಾಜಕಾರಣಿಗಳು ಇದನ್ನು ಎಂದಿಗೂ ಮಾಡುವುದಿಲ್ಲ, ಅದು ಅಷ್ಟೇ ನಿಜವಾಗಿದೆ !

ಬೆಂಗಳೂರು – ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕ್ಷೌರದಂಗಡಿ ಇಂದ ಜಾತಿಭೇದ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅನೇಕರು ದಲಿತರ ಕೂದಲನ್ನು ಕತ್ತರಿಸಲು ಹಾಗೂ ಗಡ್ಡ ತೆಗೆಯುವುದಕ್ಕೆ ನಿರಾಕರಿಸುತ್ತಿದ್ದಾರೆ. (ಸರಕಾರ ಅಂತಹವರಿಗೆ ಶಿಕ್ಷೆ ವಿಧಿಸಬೇಕು ! – ಸಂಪಾದಕ) ಆದ್ದರಿಂದ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯು ಸರಕಾರಿ ಕ್ಷೌರದಂಗಡಿಯನ್ನು ನಡೆಸಬೇಕೆಂದು ಶಿಫಾರಸು ಮಾಡಿದೆ.

ಈ ರೀತಿ ಕೇರಳದಲ್ಲಿ ಮಾಡಲಾಗಿದೆ. ಅಲ್ಲಿಯ ಸರಕಾರದಿಂದ ಕ್ಷೌರದಂಗಡಿಗಳನ್ನು ನಡೆಸಲಾಗುತ್ತಿದೆ.