ಕರ್ನಾಟಕದ ಲೋಕಾಯುಕ್ತರ ದಾಳಿಯಲ್ಲಿ ಬಹಿರಂಗಗೊಂಡ ಬ್ರಹ್ಮರಾಕ್ಷಸರೂಪಿ ಭ್ರಷ್ಟಾಚಾರ !
ವರ್ಷಾನುವರ್ಷ ಭ್ರಷ್ಟಾಚಾರವನ್ನು ಮಾಡುತ್ತಾ ಯುಕ್ತಿ-ಪ್ರಯುಕ್ತಿಗಳಿಂದ ಅದನ್ನು ಜೀರ್ಣಿಸಿಕೊಂಡು ಅಪಾರ ಸಂಪತ್ತನ್ನು ಸಂಗ್ರಹಿಸುವ ಭ್ರಷ್ಟಾಚಾರದ ಈ ಮೇರುಮಣಿಗಳನ್ನು ಕೇವಲ ತಾತ್ಕಾಲಿಕವಾಗಿ ಅಮಾನತ್ತುಗೊಳಿಸಿ ಅಲ್ಲಿಗೆ ಬಿಡದೇ, ಅವರ ಸಂಪತ್ತನ್ನು ಬಹಿರಂಗವಾಗಿ ಹರಾಜು ಮಾಡಬೇಕು. ಅವರ ಮೇಲೆ ಕಠಿಣ ಕ್ರಮವನ್ನು ಜರುಗಿಸಿ ಅವರಿಗೆ ಸೂಕ್ತ ಪ್ರಾಯಶ್ಚಿತ್ತವನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಮಾಡಬೇಕು.