ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಎಲ್ಲಿ ಯಂತ್ರದ ಮೂಲಕ ಸಂಶೋಧನೆ ಮಾಡಿ ಬದಲಾಗುವ ಫಲಿತಾಂಶವನ್ನು ಹೇಳುವ ವೈಜ್ಞಾನಿಕರು ಮತ್ತು ಎಲ್ಲಿ ಲಕ್ಷಗಟ್ಟಲೆ ವರ್ಷಗಳ ಹಿಂದೆ ಯಂತ್ರವಿಲ್ಲದೆ ಮತ್ತು ಸಂಶೋಧನೆಯಿಲ್ಲದೆ ಅಂತಿಮ ಸತ್ಯವನ್ನು ಹೇಳುವ ಋಷಿಗಳು !
ಎಲ್ಲಿ ಯಂತ್ರದ ಮೂಲಕ ಸಂಶೋಧನೆ ಮಾಡಿ ಬದಲಾಗುವ ಫಲಿತಾಂಶವನ್ನು ಹೇಳುವ ವೈಜ್ಞಾನಿಕರು ಮತ್ತು ಎಲ್ಲಿ ಲಕ್ಷಗಟ್ಟಲೆ ವರ್ಷಗಳ ಹಿಂದೆ ಯಂತ್ರವಿಲ್ಲದೆ ಮತ್ತು ಸಂಶೋಧನೆಯಿಲ್ಲದೆ ಅಂತಿಮ ಸತ್ಯವನ್ನು ಹೇಳುವ ಋಷಿಗಳು !
ಶ್ರೀರಾಮನು ಸ್ವತಃ ಈಶ್ವರ ಅವತಾರನಾಗಿದ್ದನು. ಪಾಂಡವರ ಸಮಯದಲ್ಲಿ ಪೂರ್ಣಾವತಾರ ಶ್ರೀಕೃಷ್ಣನಿದ್ದನು. ಛತ್ರಪತಿ ಶಿವಾಜಿ ಮಹಾರಾಜರ ಸಮಯದಲ್ಲಿ ಸಮರ್ಥ ರಾಮದಾಸ ಸ್ವಾಮಿಗಳು ಇದ್ದರು. ಇದರಿಂದ ಈಶ್ವರಿ ರಾಜ್ಯದ ಸ್ಥಾಪನೆಯನ್ನು ಈಶ್ವರನು ಸ್ವತಃ ಮಾಡುತ್ತಾನೆ ಅಥವಾ ಸಂತರಿಂದ ಮಾಡಿಸಿಕೊಳ್ಳುತ್ತಾನೆ ಎಂಬುದು ಗಮನಕ್ಕೆ ಬರುತ್ತದೆ.
‘ಶ್ರೀರಾಮಮಂದಿರದ ಪುನರ್ ಸ್ಥಾಪನೆಯಾದ ನಂತರ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ಒತ್ತಡದಿಂದಾಗಿ ದೇವಸ್ಥಾನದ ಪೂಜೆ-ಅರ್ಚನೆ, ಧಾರ್ಮಿಕ ವಿಧಿ ಇತ್ಯಾದಿ ಅಂಶಗಳನ್ನು ಹಾಗೂ ಧರ್ಮನಿಯಮಗಳನ್ನು ಪಾಲಿಸದಿದ್ದರೆ ಹಿಂದೂಗಳು ಪುನಃ ವೈಯಕ್ತಿಕವಾಗಿ ಹಾಗೂ ರಾಷ್ಟ್ರೀಯವಾಗಿ ದುಃಖದಿಂದ ಬಳಲುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾದರೆ, ಶ್ರೀರಾಮ ಹಾಗೂ ದೇವತೆಗಳು ಅವರತ್ತ ಗಮನ ನೀಡುವರೇ ?
‘ಧರ್ಮಶಿಕ್ಷಣ ಮತ್ತು ಸಾಧನೆ ಇವುಗಳ ಅಭಾವದಿಂದ ಕೃತಘ್ನರಾಗಿರುವ ಈಗಿನ ಪೀಳಿಗೆಗೆ ತಂದೆ-ತಾಯಿಯರ ಆಸ್ತಿ ಮಾತ್ರ ಬೇಕಾಗಿರುತ್ತದೆ; ಆದರೆ ಅವರು ವೃದ್ಧ ತಂದೆ-ತಾಯಿಯರ ಸೇವೆ ಮಾಡಲು ಸಿದ್ಧರಿರುವುದಿಲ್ಲ. ವೈಜ್ಞಾನಿಕ ಸಂಶೋಧನೆಯ ಧ್ಯೇಯವು ಮನುಷ್ಯನಿಗೆ ಈಶ್ವರಪ್ರಾಪ್ತಿ ಮಾಡಿಸುವುದ ಅಲ್ಲ ಬದಲಾಗಿ ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸುಖಪ್ರಾಪ್ತಿ ಮಾಡಿಸಿಕೊಡುವುದು ಆಗಿದೆ !
‘ರಾಜಕಾರಣಿಗಳು, ಬುದ್ಧಿಜೀವಿಗಳು ಅಥವಾ ವಿಜ್ಞಾನಿಗಳು ಇವರಿಂದಾಗಿ ವಿದೇಶಿಯರು ಭಾರತಕ್ಕೆ ಬರುವುದಿಲ್ಲ ಬದಲಾಗಿ ಸಂತರಿಂದಾಗಿ ಹಾಗೂ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ. ಆದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮ ಇವುಗಳ ಬೆಲೆ ತಿಳಿದಿರುವುದಿಲ್ಲ.
ನ ಮೇ ಭಕ್ತಃ ಪ್ರಣಶ್ಯತಿ | ಅಂದರೆ ಭಕ್ತನಿಗೆ ಅಂದರೆ ಸಾಧನೆ ಮಾಡುವವನನ್ನು ದೇವರು ಕಾಪಾಡುತ್ತಾನೆ. ಇದನ್ನು ಗಮನದಲ್ಲಿಟ್ಟು ಈಗಿ ನಿಂದಲೇ ತೀವ್ರ ಸಾಧನೆ ಮಾಡಿದರೆ ಮಾತ್ರ ದೇವರು ಮೂರನೇ ಮಹಾ ಯುದ್ಧದಲ್ಲಿ ಕಾಪಾಡುವನು.
‘ಎಲ್ಲಿ ಪೃಥ್ವಿಯ ಮೇಲೆ ರಾಜ್ಯ ನಡೆಸುವ ಧ್ಯೇಯವುಳ್ಳ ಕೆಲವು ಪಂಥಗಳು ಮತ್ತು ಎಲ್ಲಿ ‘ಪ್ರತಿಯೊಬ್ಬರಿಗೆ ಈಶ್ವರಪ್ರಾಪ್ತಿಯಾಗಬೇಕು. ಎಂಬ ಧ್ಯೇಯವಿರುವ ಮಹಾನ ಹಿಂದೂ ಧರ್ಮ !
‘ಭಾರತದಲ್ಲಿ ‘ಭಾರತರತ್ನ ಸರ್ವೋಚ್ಚ ಸ್ಥಾನವಾಗಿದೆ. ಜಗತ್ತಿನಲ್ಲಿ ‘ನೋಬೆಲ್ ಪ್ರೈಸ್ ಸರ್ವೋಚ್ಚ ಸ್ಥಾನವಾಗಿದ್ದರೆ, ಸನಾತನವು ಘೋಷಿಸುತ್ತಿರುವ ‘ಜನ್ಮ-ಮೃತ್ಯುಗಳಿಂದ ಮುಕ್ತರು ಮತ್ತು ‘ಸಂತರು ಎಂಬ ಸ್ಥಾನಗಳು ಈಶ್ವರನ ವಿಶ್ವದಲ್ಲಿ ಎಲ್ಲಕ್ಕಿಂತ ಮಹತ್ವದ್ದಾಗಿದೆ !
ರಾಜಕೀಯ ಪಕ್ಷದ ನೇತಾರರು ಮತ್ತು ಕಾರ್ಯಕರ್ತರು ಯಾರೇ ಹಣ ಅಥವಾ ಹುದ್ದೆಯನ್ನು ನೀಡಿದರೆ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತನು ದೇವರ ಪಕ್ಷವನ್ನು ಬಿಟ್ಟು, ದೇವರ ಚರಣದಲ್ಲಿರುವ ಜಾಗವನ್ನು ಬಿಟ್ಟು ಬೇರೆಕಡೆ ಎಲ್ಲಿಯೂ ಹೋಗುವುದಿಲ್ಲ.
ಬುದ್ಧಿಜೀವಿಗಳೇ ಮತ್ತು ವಿಜ್ಞಾನಿಗಳೇ ‘ವಿಜ್ಞಾನವನ್ನು ಹುಡುಕಲು ಬುದ್ಧಿ ಯಾರು ನೀಡಿದರು ?, ಇದರ ಬಗ್ಗೆ ಎಂದಾದರೂ ವಿಚಾರ ಮಾಡಿದ್ದೀರಾ ? ಆ ಬುದ್ಧಿಯನ್ನು ಈಶ್ವರನು ನೀಡಿದ್ದಾನೆ. ಹೀಗಿರುವಾಗಲೂ ‘ಈಶ್ವರನು ಇಲ್ಲ ಎಂದು ಯಾರಾದರೂ ನಿಜವಾದ ಬುದ್ಧಿವಂತರೆಂದು ಹೇಳಲು ಸಾಧ್ಯವೇ ?