ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಯಾರೂ ಏನನ್ನೂ ಮಾಡಬೇಕಾಗಿಲ್ಲ; ಏಕೆಂದರೆ ಅದು ಕಾಲಮಹಾತ್ಮೆಗನುಸಾರ ಆಗಲಿದೆ; ಆದರೆ ಈ ಕಾರ್ಯದಲ್ಲಿ ತನು-ಮನ-ಧನದ ತ್ಯಾಗ ಮಾಡುವ ಮೂಲಕ ಭಾಗವಹಿಸುವವರು ತಮ್ಮ ಸಾಧನೆಯ ಮೂಲಕ ಜನನ ಮತ್ತು ಮರಣದ ಚಕ್ರದಿಂದ ಮುಕ್ತ
‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಯಾರೂ ಏನನ್ನೂ ಮಾಡಬೇಕಾಗಿಲ್ಲ; ಏಕೆಂದರೆ ಅದು ಕಾಲಮಹಾತ್ಮೆಗನುಸಾರ ಆಗಲಿದೆ; ಆದರೆ ಈ ಕಾರ್ಯದಲ್ಲಿ ತನು-ಮನ-ಧನದ ತ್ಯಾಗ ಮಾಡುವ ಮೂಲಕ ಭಾಗವಹಿಸುವವರು ತಮ್ಮ ಸಾಧನೆಯ ಮೂಲಕ ಜನನ ಮತ್ತು ಮರಣದ ಚಕ್ರದಿಂದ ಮುಕ್ತ
ನನ್ನ ಭಕ್ತರ ನಾಶವಾಗುವುದಿಲ್ಲ. ಭಕ್ತರ ಅಂದರೆ ಸಾಧನೆ ಮಾಡುವವರನ್ನೇ ದೇವರು ರಕ್ಷಿಸುತ್ತಾನೆ. ಇದನ್ನು ಗಮನದಲ್ಲಿಟ್ಟು ಇಂದಿನಿಂದ ತೀವ್ರ ಸಾಧನೆ ಮಾಡಿ, ಆಗಲೇ ದೇವರು ಮೂರನೇ ಮಹಾಯುದ್ಧದಲ್ಲಿ ಬದುಕಿಸುವನು.
‘ಹಿಂದೂ ರಾಷ್ಟ್ರದಲ್ಲಿ (ಸನಾತನ ಧರ್ಮ ರಾಜ್ಯದಲ್ಲಿ) ನಿಯತಕಾಲಿಕೆಗಳು, ದೂರದರ್ಶನ ವಾಹಿನಿಗಳು, ಜಾಲತಾಣಗಳು ಇತ್ಯಾದಿಗಳನ್ನು ಕೇವಲ ಧರ್ಮಶಿಕ್ಷಣ ಮತ್ತು ಸಾಧನೆಗೆ ಮಾತ್ರ ಬಳಸಲಾಗುವುದು. ಇದರಿಂದ ಅಪರಾಧಿಗಳು ಇರುವುದಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇರುವುದರಿಂದ ಆನಂದದಿಂದ ಇರುವರು.
ಸತ್ಯಯುಗದಲ್ಲಿ ದಿನಪತ್ರಿಕೆಗಳು, ದೂರಚಿತ್ರವಾಹಿನಿ, ಜಾಲತಾಣ ಇತ್ಯಾದಿಗಳ ಅವಶ್ಯಕತೆ ಇರಲಿಲ್ಲ; ಏಕೆಂದರೆ ಯಾವುದೇ ಕೆಟ್ಟ ಸುದ್ದಿ ಇರಲಿಲ್ಲ, ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿದ್ದು ಆನಂದದಲ್ಲಿದ್ದರು.
‘ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ರಾಷ್ಟ್ರ-ಧರ್ಮಕ್ಕಾಗಿ ಕಾರ್ಯ ಮಾಡಿದರೆ ಏನೂ ಸಾಧ್ಯವಾಗುವುದಿಲ್ಲ, ಎಂಬುದು ಕಳೆದ ೭೨ ವರ್ಷಗಳಲ್ಲಿ ಅನೇಕ ಸಲ ಸಿದ್ಧವಾಗಿದೆ. ‘ಈಗ ಅವುಗಳೊಂದಿಗೆ ಆಧ್ಯಾತ್ಮಿಕ ಮಟ್ಟದಲ್ಲಿಯೂ ಕಾರ್ಯ ಮಾಡುವುದು ಅತ್ಯಗತ್ಯವಿದೆ, ಎಂಬುದನ್ನು ಎಲ್ಲರೂ ಗಮನದಲ್ಲಿಡುವ ಅವಶ್ಯಕವಿದೆ.
ಬುದ್ಧಿಜೀವಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ ಅವರು ಚಿಕ್ಕಕ್ಕಿಂತ ಅತಿ ಚಿಕ್ಕದಾಗಿರುವ ಜೀವಿಯ ಒಂದು ಕೋಶವನ್ನು ಮಾತ್ರವಲ್ಲದೆ, ಬಾಹ್ಯ ವಸ್ತುಗಳನ್ನು ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಮಾಡಲು ಸಾಧ್ಯವಿಲ್ಲ ಮತ್ತು ತದ್ವಿರುದ್ಧ ಈಶ್ವರನು ಲಕ್ಷಗಟ್ಟಲೆ ಕೋಶವಿರುವ ಮಾನವ ಮತ್ತು ಅನಂತಕೋಟಿ ಬ್ರಹ್ಮಾಂಡವನ್ನು ನಿರ್ಮಿಸಿದ್ದಾನೆಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ಧರ್ಮ ಎಂಬ ಪದದ ಅರ್ಥ ಜಗತ್ತನ್ನು ಅನಿಷ್ಟಗಳಿಂದ ರಕ್ಷಿಸುವ, ಹಾಗೆಯೇ ಮಾನವನಿಗೆ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯೊಂದಿಗೆ ಮೋಕ್ಷವನ್ನು ನೀಡುವ ತತ್ತ್ವವೆಂದರೆ ಧರ್ಮ. ಹೆಚ್ಚಿನ ವಿದೇಶಿ ಭಾಷೆಗಳಲ್ಲಿ, ಧರ್ಮ ಎಂಬ ಪದಕ್ಕೆ ಸಮಾನಾರ್ಥಕ ಪದವೇ ಇಲ್ಲ ! ಆದುದರಿಂದ ಅವರಿಗೆ ತಮ್ಮ ಧರ್ಮಾಚರಣೆಯನ್ನು ಮಾಡಲು ಕಷ್ಟವಾಗುತ್ತದೆ.
ಸಮಾಜ ಸಾತ್ತ್ವಿಕವಾಗಲು ಧರ್ಮ ಶಿಕ್ಷಣವನ್ನು ನೀಡದೇ ಕೇವಲ ಅಪರಾಧಿಗಳಿಗೆ ಶಿಕ್ಷೆ ನೀಡಿ ಅಪರಾಧ ತಡೆಯಲು ಸಾಧ್ಯವಿಲ್ಲ ಎಂಬುದೂ ತಿಳಿಯದ ಇಲ್ಲಿಯವರೆಗಿನ ರಾಜಕಾರಣಿಗಳು ! ಹಿಂದೂ ರಾಷ್ಟ್ರದಲ್ಲಿ ಎಲ್ಲರಿಗೂ ಧರ್ಮಶಿಕ್ಷಣ ನೀಡಿದರೆ ಅಪರಾಧಿಗಳೇ ಇರುವುದಿಲ್ಲ !
‘ಅನೇಕ ಅಪರಾಧಗಳನ್ನು ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವವನಿಗೆ ಸರಕಾರವು ಹೇಗೆ ಶಿಕ್ಷಿಸುವುದು ? ಈಶ್ವರನು ಮಾತ್ರ ಶಿಕ್ಷಿಸುತ್ತಾನೆ. ಇದರಿಂದ ಈಶ್ವರನ ರಾಜ್ಯ ಎಷ್ಟು ಕಲ್ಪನಾತೀತವಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಆದುದರಿಂದ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಪ್ರಯತ್ನನಿರತರಾಗಿರಿ.
ದೇವರು ಎಲ್ಲೆಡೆ ಇದ್ದಾನೆ, ಪ್ರತಿಯೊಬ್ಬರಲ್ಲಿ ಇದ್ದಾನೆ, ಇದು ಹಿಂದೂ ಧರ್ಮದ ಬೋಧನೆಯಾಗಿರುವುದರಿಂದ ಹಿಂದೂಗಳಿಗೆ ಇತರ ಧರ್ಮೀಯರ ದ್ವೇಷವನ್ನು ಮಾಡಲು ಕಲಿಸವುದಿಲ್ಲ.