ಭಗವಾನ್ ಶಿವನನ್ನು ಅವಮಾನಿಸಿದ ಪ್ರಕರಣದಲ್ಲಿ ಬಂಗಾಲಿ ನಟಿ ಸಯಾನಿ ಘೋಷ ವಿರುದ್ಧ ದೂರು

*ಓರ್ವ ಮಹಿಳೆಯು ಶಿವಲಿಂಗಕ್ಕೆ ನಿರೋಧ ಹಾಕುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ ಪ್ರಕರಣ

ಮೇಘಾಲಯದ ಮಾಜಿ ರಾಜ್ಯಪಾಲ ತಥಾಗತ ರಾಯ್ ಇವರು ಸೈಬರ್ ಪೊಲೀಸರಲ್ಲಿ ದಾಖಲಿಸಿದ ದೂರ

ಕೋಲಕಾತಾ (ಬಂಗಾಲ) : ಬಂಗಾಲಿ ಚಲನಚಿತ್ರ ನಟಿ ಸಯಾನಿ ಘೋಷ ಇವರು ಭಗವಾನ್ ಶಿವನನ್ನು ಅವಮಾನಿಸಿದ ಪ್ರಕರಣದಲ್ಲಿ ಮೇಘಾಲಯದ ಮಾಜಿ ರಾಜ್ಯಪಾಲ ತಥಾಗತ ರಾಯ್ ಇವರು ಸೈಬರ್ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.

೧. ಸಯಾನಿ ಘೋಷ ಇವರು ೧೮ ಫೆಬ್ರವರಿ ೨೦೧೫ ರಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಓರ್ವ ಮಹಿಳೆಯು ಶಿವಲಿಂಗಕ್ಕೆ ನಿರೋಧ ಹಾಕುತ್ತಿರುವುದನ್ನು ತೋರಿಸಲಾಗಿದೆ. ಆ ಚಿತ್ರದಲ್ಲಿ, ‘ದೇವರು ಈಗ ಇನ್ನು ಹೆಚ್ಚು ಉಪಕಾರಿಯಾಗಲಾರರು’, ಎಂದು ಬರೆಯಲಾಗಿತ್ತು. ಸಯಾನಿ ಇವರ ವಿರುದ್ಧ ಇದಕ್ಕೂ ಮೊದಲು ಅಸ್ಸಾಂನ ರಾಜಧಾನಿ ಗೌಹಾತಿಯಲ್ಲಿಯೂ ದೂರನ್ನು ದಾಖಲಿಸಲಾಗಿತ್ತು.

೨. ೨೦೧೫ ರಲ್ಲಿ ಈ ಚಿತ್ರದ ವಿಷಯದಲ್ಲಿ ವಾದವು ಪ್ರಾರಂಭವಾದಾಗ ಸಯಾನಿಯವರು ಸ್ಪಷ್ಟೀಕರಣವನ್ನು ನೀಡುವಾಗ, ನನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ ನಾನು ಇದನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದರು.