ಸೀತಾ ಮಾತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದ ವಿರುದ್ಧ ಅಪರಾಧ ದಾಖಲು

ಹೇಗೆ ಪಾಕಿಸ್ತಾನದಲ್ಲಿ ಧರ್ಮನಿಂದೆ ಮಾಡುವವರಿಗೆ ಮರಣದಂಡನೆ ವಿಧಿಸಲಾಗುತ್ತದೆಯೋ, ಭಾರತದಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸುವವರಿಗೂ ಈಗ ಅದೇ ಶಿಕ್ಷೆಯನ್ನು ವಿಧಿಸಬೇಕು. ಆಗ ಮಾತ್ರ ಹಿಂದೂ ಧರ್ಮ, ದೇವತೆಗಳ ಅವಮಾನ ನಿಲ್ಲುತ್ತವೆ; ಆದರೆ ಅದಕ್ಕೆ ಹಿಂದೂ ರಾಷ್ಟ್ರಕ್ಕೆ ಪರ್ಯಾಯ ಮಾರ್ಗವಿಲ್ಲ, ಇದು ಅಷ್ಟೇ ನಿಜವಾಗಿದೆ !

ಕಲ್ಯಾಣ ಬ್ಯಾನರ್ಜಿ

ಕೋಲಕಾತಾ (ಬಂಗಾಳ) – ರಾಜ್ಯದ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ವಕೀಲರಾದ ಕಲ್ಯಾಣ ಬ್ಯಾನರ್ಜಿಯವರು ಸೀತಾ ಮಾತೆಯ ಬಗ್ಗೆ ಅಗೌರವ ತೋರಿರುವ ವಿರುದ್ಧ ಅಪರಾಧ ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಆಶಿಷ ಜೈಸ್ವಾಲ್ ಅವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ. ‘ಬ್ಯಾನರ್ಜಿಯವರು ಹಿಂದೂಗಳ ಕ್ಷಮೆಯಾಚಿಸಬೇಕು’ ಎಂದು ಜೈಸ್ವಾಲ್ ಹೇಳಿದ್ದಾರೆ. ಬ್ಯಾನರ್ಜಿ ಅವರ ಟೀಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

(ಈ ಮೇಲಿನ ಚಿತ್ರ/ವಿಡಿಯೋ ತೋರಿಸುವ ಉದ್ದೇಶ ಯಾರ ಭಾವನೆಗೆ ಧಕ್ಕೆ ತರುವುದಾಗಿರದೆ ಹಿಂದೂ ವಿರೋಧಿಗಳು ಮಾಡಿದ ವಿಡಂಬನೆಯು ತಿಳಿಯಬೇಕು, ಈ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು)

ಬ್ಯಾನರ್ಜಿಯವರು ನೀಡಿದ ಅಶ್ಲೀಲ ಹೇಳಿಕೆ !

ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ‘ಸೀತಾ ರಾಮನ ಬಳಿಗೆ ಹೋಗಿ, ನಾನು ಅದೃಷ್ಟಶಾಲಿಯಾಗಿದ್ದೇನೆ ಏಕೆಂದರೆ ನನ್ನನ್ನು ರಾವಣ ಅಪಹರಿಸಿದ, ಒಂದುವೇಳೆ ನಿಮ್ಮ ಕೇಸರಿ ವಸ್ತ್ರ ಧರಿಸುವ ಶಿಷ್ಯನು ನನ್ನನ್ನು ಅಪಹರಿಸುತ್ತಿದ್ದರೆ, ನನ್ನ ಹಾಥರಸ (ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಯುವತಿ ಕೆಲವು ದಿನಗಳ ನಂತರ ಸಾವಿಗೀಡಾದಳು) ಹಾಗೆ ಆಗುತ್ತಿತ್ತು ಎಂದು ಹೇಳಿದ್ದರು’.