ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ಪ್ರತಿಷ್ಠಾನ ಉರುಳಿಕಾಂಚನ (ಪುಣೆ) ಇವರ ವತಿಯಿಂದ ಪುಣೆಯಲ್ಲಿ ಪ್ರಶಸ್ತಿ ಪ್ರದಾನ !
![](https://static.sanatanprabhat.org/wp-content/uploads/sites/5/2024/04/29115452/Rashtraseva_puraskar-1.jpg)
ಪುಣೆ, ಏಪ್ರಿಲ್ ೨೮ (ವಾರ್ತೆ) – ಹಿಂದೂ ಜನಜಾಗೃತಿ ಸಮಿತಿಯ ಅಮರಾವತಿಯ ಶ್ರೀ. ನಿಲೇಶ ಟವಲಾರೆ ಇವರಿಗೆ ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ರಾಷ್ಟ್ರಸೇವಾ’ ಪ್ರಶಸ್ತಿ ನೀಡಿದರು. ಇದರೊಂದಿಗೆ ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಜ್ಯ ಮಟ್ಟದ ಸದಸ್ಯ ಶ್ರೀ. ಅನೂಪ ಜೈಸ್ವಾಲ್ ಇವರಿಗೂ ಕೂಡ ಈ ಪ್ರಶಸ್ತಿ ನೀಡಿ ಗೌರವಿಸಿದರು. ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ಪ್ರತಿಷ್ಠಾನ ಉರುಳಿಕಾಂಚನ’ ಈ ಸಂಘಟನೆಯ ವತಿಯಿಂದ ಡಾ. ಬಾಬಾ ಸಾಹೇಬ ಅಂಬೇಡ್ಕರ ಸಂಸ್ಕೃತಿಕ ಭವನದಲ್ಲಿ ‘ಪದ್ಮಶ್ರೀ ಡಾ. ಮಣಿಬಾಯಿ ದೇಸಾಯಿ ರಾಷ್ಟ್ರಸೇವಾ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದರು. ಈ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯ ಮಾಡಿರುವ ಗಣ್ಯರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಯದಲ್ಲೇ ಪ್ರತಿಷ್ಠಾನದ ಅಧ್ಯಕ್ಷ ಹಿಂದುರತ್ನ ಡಾ. ರವೀಂದ್ರ ಭೋಳೆ ಇವರಿಂದ ವಿವಿಧ ಕ್ಷೇತ್ರದಲ್ಲಿ ಗಣನೀಯ ಕಾರ್ಯ ಮಾಡಿರುವ ಗಣ್ಯರಿಗೆ ಪ್ರಶಸ್ತಿ ನೀಡಲಾಯಿತು. ಈ ಪ್ರಸಂಗದಲ್ಲಿ ವೇದಿಕೆಯಲ್ಲಿ ಸ್ವಾಮಿ ದಿವ್ಯಾನಂದ ಗಿರಿ, ಸರ್ವೋತ್ಕರ್ಷ ಟ್ರಸ್ಟಿನ ರಾಜೇಶ ದಾತಾರ, ಪ್ರತಿಷ್ಠಾನದ ಉಪಾಧ್ಯಕ್ಷ ಅಶೋಕ ಪಾಟೀಲ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಕೇಂದ್ರ ಸರಕಾರದ ನೀತಿ ಆಯೋಗದಿಂದ ಸಂಚಾಲಿತ ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ಪ್ರತಿಷ್ಠಾನ ಉರುಳಿಕಾಂಚನ (ಪುಣೆ)’ ಈ ಸಂಸ್ಥೆಯ ವತಿಯಿಂದ ಪ್ರತಿವರ್ಷ ದೇಶಾದ್ಯಂತ ವಿವಿಧ ಗಣ್ಯರನ್ನು ಗಣನಿಯ ಕಾರ್ಯ ಮಾಡಿರುವುದರ ಬಗ್ಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರ ಭೋಳೆ ಇವರಿಗೆ ಇತ್ತೀಚಿಗೆ ‘ಹಿಂದೂರತ್ನ’ ಪ್ರಶಸ್ತಿಯಿಂದ ಗೌರವಿಸಲಾಗಿದೆ.
![](https://static.sanatanprabhat.org/wp-content/uploads/sites/5/2024/04/29115446/rashtrseva_puraskar-2.jpg)
ಪ್ರಶಸ್ತಿ ದೊರೆತ ನಂತರ ಶ್ರೀ. ನಿಲೇಶ ಟವಲಾರೆ ಇವರು ಮನೋಗತ ವ್ಯಕ್ತಪಡಿಸುವಾಗ, ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಚರಣಗಳಲ್ಲಿ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ. ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ಪ್ರತಿಷ್ಠಾನ ತ್ಯಾಗದ ಭಾವನೆಯಿಂದ ಸಮಾಜಕ್ಕಾಗಿ ಕಾರ್ಯ ಮಾಡುತ್ತಿದೆ. ನಿಮ್ಮೆಲ್ಲರಿಗೆ ಅಭಿನಂದನೆ. ಶ್ರೀ. ರವೀಂದ್ರ ಭೋಳೆ ಇವರು ಈ ಕಾರ್ಯವನ್ನು ಮುಂದುವರಿಸಲಿ, ಎಂದು ಅವರು ಶುಭ ಹಾರೈಸಿದರು !