ಭೂಮಿಪೂಜೆಗಾಗಿ ಶ್ರೀ ರಾಮಲಲ್ಲಾ, ಅವನ ಮೂವರು ಸಹೋದರರು ಹಾಗೂ ಬಾಲ ಹನುಮಾನನಿಗೆ ಆಮಂತ್ರಣ!
ಆಗಸ್ಟ್ ೫ ರಂದು ರಾಮ ಜನ್ಮಭೂಮಿಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆಗಾಗಿ ಮೊದಲು ಶ್ರೀ ರಾಮಾಲಲ್ಲಾ ಅವನ ಮೂವರು ಸಹೋದರರು ಮತ್ತು ಬಾಲ ಹನುಮಾನನಿಗೆ ಆಮಂತ್ರಣವನ್ನು ನೀಡಲಾಯಿತು. ಇಲ್ಲಿಯ ರಾಮಲಲ್ಲಾ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಅರ್ಪಣೆ ಮಾಡಿ ದೇವರಿಗೆ ಉಪಸ್ಥಿತರಿರಲು ಹಾಗೂ ಇಡೀ ಸಮಾರಂಭವು ನಿರ್ವಿಘ್ನವಾಗಿ ನೆರವೇರಬೇಕೆಂದು ಪ್ರಾರ್ಥನೆಯನ್ನು ಮಾಡಲಾಯಿತು.