ಈ ಸಲದ ರಕ್ಷಾಬಂಧನಕ್ಕೆ ಭಾರತೀಯ ರಾಖಿಯನ್ನು ಕಟ್ಟಿರಿ ! – ‘ಕನ್ಫೇಡರೇಶನ ಆಫ್ ಆಲ್ ಇಂಡಿಯಾ ಟ್ರೇಡರ್ಸ’ ನಿಂದ ಕರೆ

ಆಗಸ್ಟ್ ೩ ರಂದು ಇರುವ ರಕ್ಷಾಬಂಧನಕ್ಕಾಗಿ ಯಾರೂ ಚೀನಾ ಸಾಹಿತ್ಯದಿಂದ ನಿರ್ಮಿಸಿದ ರಾಖಿಗಳನ್ನು ಉಪಯೋಗಿಸಬಾರದು, ಎಂದು ದೇಶದ ಎಲ್ಲಕ್ಕಿಂತ ದೊಡ್ಡದಾದ ವ್ಯಾಪಾರಿ ಸಂಘಟನೆಯಾದ ‘ಕನ್ಫೇಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ’ (‘ಕ್ಯಾಟ್’ವು) ಕರೆ ನೀಡಿದೆ. ಜೂನ್ ೧೦ ರಿಂದ ‘ಕ್ಯಾಟ್’ನಿಂದ ‘ಭಾರತೀಯ ವಸ್ತು ನಮ್ಮ ಅಭಿಮಾನ’ ಈ ಅಭಿಯಾನದ ಅಂತರ್ಗತ ಚೀನಾದ ವಸ್ತುವಿನ ಮೇಲೆ ಬಹಿಷ್ಕಾರ ಹಾಕಲು ಆರಂಭಿಸಲಾಗಿದೆ.

ಕುಲಗಾಮನಲ್ಲಿ ೩ ಭಯೋತ್ಪಾದಕರ ಹತ್ಯೆ

ಇಲ್ಲಿ ಜುಲೈ ೧೭ ರಂದು ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಗಳು ೩ ಭಯೋತ್ಪಾದಕರ ಹತ್ಯೆ ಮಾಡಿದ್ದಾರೆ. ಇದರಲ್ಲಿ ೩ ಸೈನಿಕರೂ ಗಾಯಗೊಂಡಿದ್ದಾರೆ. ಈ ಚಕಮಕಿ ಸಂಜೆಯ ತನಕ ನಡೆಯುತ್ತಿತ್ತು. ಈ ಹಿಂದೆ ಜುಲೈ ೧೬ ರಂದು ಕುಪವಾಡಾದ ಕೆರನ ಸೆಕ್ಟರ್‌ನಲ್ಲಿ ನುಸುಳಲು ಪ್ರಯತ್ನಿಸುತ್ತಿದ್ದ ಓರ್ವ ಭಯೋತ್ಪಾದಕನ ಹತ್ಯೆ ಮಾಡಲಾಗಿದೆ.

ಸೀತಾಪುರ (ಉತ್ತರಪ್ರದೇಶ) ಇಲ್ಲಿ ಮತಾಂಧರಿಂದ ೧೨ ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದರಿಂದ ಸ್ಥಿತಿ ಉದ್ವಿಗ್ನ

ಇಲ್ಲಿಯ ಪಕರಿಯಾ ಗ್ರಾಮದಲ್ಲಿ ಜಾಹಿದ, ರಾಶಿದ ಹಾಗೂ ಸಾಹಿರ ಈ ಮೂವರು ೧೨ ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಪೀಡಿತೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದಾದ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ.

‘ಹಿಂದೂ’ ಹೆಸರಿನ ಸುಳ್ಳು ಖಾತೆಯಿಂದ ಹಾಸ್ಯನಟಿ ಅಗ್ರಿಮಾ ಜೊಶುವಾಗೆ ಬಲಾತ್ಕಾರದ ಬೆದರಿಕೆಯೊಡ್ಡಿದ ಮತಾಂಧನ ಬಂಧನ

ಸಾಮಾಜಿಕ ಮಾಧ್ಯಮಗಳಲ್ಲಿ ‘ಉಮೇಶದಾದಾ’ ಈ ಹೆಸರಿನ ನಕಲಿ ಖಾತೆಯನ್ನು ತೆರೆದು ಅದರಿಂದ ಹಾಸ್ಯನಟಿ ಅಗ್ರಿಮಾ ಜೊಶುವಾಗೆ ಬಲಾತ್ಕಾರದ ಬೆದರಿಕೆಯೊಡ್ಡಿದ ಇಮ್ತಿಯಾಜ ಶೇಖ ಎಂಬ ಮತಾಂಧನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಗೋಪಾಲಗಂಜ(ಬಿಹಾರ)ನಲ್ಲಿ ೨೬೪ ಕೋಟಿ ಖರ್ಚು ಮಾಡಿ ನಿರ್ಮಿಸಿದ ಸೇತುವೆ ಅತೀವೃಷ್ಟಿಯಿಂದಾಗಿ ೨೯ ದಿನಗಳಲ್ಲೇ ಕೊಚ್ಚಿಹೋಯಿತು !

ಇಲ್ಲಿ ೨೬೪ ಕೋಟಿ ಖರ್ಚು ಮಾಡಿ ಗಂಧಕ ನದಿಯ ಮೇಲೆ ಕಟ್ಟಿದ್ದ ಸತ್ತರಘಾಟ ಸೇತುವೆಯು ಅತೀವೃಷ್ಟಿಯಿಂದಾಗಿ ೨೯ ದಿನಗಳಲ್ಲೇ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಇದರಿಂದ ಲಾಲಛಾಪಾರ, ಮುಜಫ್ಫರಪುರ, ಮೋತಿಹಾರಿ ಹಾಗೂ ಬೇತಿಯಾ ಈ ಊರುಗಳ ಸಂಪರ್ಕ ಕಡಿತಗೊಂಡಿದೆ. ೨೯ ದಿನಗಳ ಹಿಂದೆ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಈ ಸೇತುವೆಯನ್ನು ‘ವಿಡಿಯೋ ಕಾನ್ಫರೆನ್ಸ್’ ಮೂಲಕ ಉದ್ಘಾಟಿಸಿದ್ದರು.

ದೇಶದಲ್ಲಿ ಸಪ್ಟೆಂಬರ್ ೧ ರ ತನಕ ಕೊರೋನಾ ೩೫ ಲಕ್ಷ ರೋಗಿಗಳಾಗಬಹುದು ! – ‘ಭಾರತೀಯ ವಿಜ್ಞಾನ ಸಂಸ್ಥೆ’ಯ ಅಂದಾಜು

ಬೆಂಗಳೂರು – ದೇಶದಲ್ಲಿ ಸಪ್ಟೆಂಬರ್ ೧ ರ ತನಕ ಕೊರೋನಾ ಪೀಡಿತರ ಸಂಖ್ಯೆ ೩೫ ಲಕ್ಷಕ್ಕಿಂತಲೂ ಹೆಚ್ಚಾಗಬಹುದು ಹಾಗೂ ೧೦ ಲಕ್ಷ ಸಕ್ರಿಯ ರೋಗಿಗಳೂ (ಎಕ್ಟಿವ್ ಕೇಸಸ್) ಆಗುವರು ಎಂದು ‘ಭಾರತೀಯ ವಿಜ್ಞಾನ ಸಂಸ್ಥೆ’ಯು ಅಂದರೆ ‘ಐ.ಐ.ಎಸ್.ಸಿ.’ನ ಪ್ರಾಧ್ಯಾಪಕರಾದ ಶಶಿಕುಮಾರ ಜಿ., ಪ್ರಾಧ್ಯಾಪಕ ದೀಪಕ ಎಸ್. ಹಾಗೂ ಅವರ ಸರಕಾರಿಗಳು ಅಂದಾಜಿಸಿದ್ದಾರೆ. (ಸೌಜನ್ಯ : NEWS9 live) ಈ ಸಂಸ್ಥೆಯ ಅಧ್ಯಯನದ ಪ್ರಕಾರ, ೧. ಸಪ್ಟೆಂಬರ ೧ ರ ತನಕ ಮಹಾರಾಷ್ಟ್ರದಲ್ಲಿ ರೋಗಿಗಳ ಸಂಖ್ಯೆ ೬ ಲಕ್ಷ … Read more

ನಟ ಸುಶಾಂತ್ ರಾಜಪುತನ ಆತ್ಮಹತ್ಯೆಯ ತನಿಖೆಯನ್ನು ಸಿಬಿಐಗೆ ನೀಡಿ ! – ಡಾ. ಸುಬ್ರಮಣಿಯನ್ ಸ್ವಾಮಿಯಿಂದ ಮೋದಿಗೆ ಪತ್ರ

ನಟ ಸುಶಾಂತ ಸಿಂಹ ರಾಜಪುತ ಇವರ ಆತ್ಮಹತ್ಯೆಯ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ನೀಡಬೇಕು, ಎಂದು ಭಾಜಪದ ಹಿರಿಯ ನಾಯಕ ಹಾಗೂ ಶಾಸಕ ಡಾ. ಸುಬ್ರಮಣಿಯನ್ ಸ್ವಾಮಿ ಇವರು ಪತ್ರದ ಮೂಲಕ ಪ್ರಧಾನಿ ಮೋದಿಯವರಿಗೆ ಆಗ್ರಹಿಸಿದ್ದಾರೆ. ‘ಹಿಂದಿ ಚಿತ್ರರಂಗದ ದೊಡ್ಡ ವ್ಯಕ್ತಿಗಳು ಈ ಬಗ್ಗೆ ಒತ್ತಡವನ್ನು ತರಲು ದುಬೈಯ ಕುಖ್ಯಾತ ಗೂಂಡಾಗಳ ಸಂಪರ್ಕದಲ್ಲಿದ್ದಾರೆ’, ಎಂದೂ ಅವರು ಈ ಪತ್ರದಲ್ಲಿ ಹೇಳಿದ್ದಾರೆ.

ಇನ್ನು ಕೊರೋನಾದಿಂದ ಕೇವಲ ಭಗವಂತನೇ ಕಾಪಾಡಬಹುದು ! – ಆರೋಗ್ಯ ಸಚಿವ ಬಿ. ಶ್ರೀರಾಮುಲು

ಹೆಚ್ಚಾಗುತ್ತಿರುವ ಕೊರೋನಾದ ಹಾವಳಿಯಿಂದ ಇನ್ನು ಕೇವಲ ಭಗವಂತನೇ ಕಾಪಾಡಬಹುದು, ಎಂದು ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಇವರು ನುಡಿದಿದ್ದಾರೆ. ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಸದ್ಯ ಕರ್ನಾಟಕದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಒಟ್ಟು ೪೭ ಸಾವಿರದ ೨೫೩ ರಷ್ಟಿದೆ. ಈ ಪೈಕಿ ೧೮ ಸಾವಿರದ ೪೬೬ ರೋಗಿಗಳು ಗುಣಮುಖರಾಗಿ ಮನೆಗೆ ಹೋಗಿದ್ದಾರೆ.

ಮಿರತ (ಉತ್ತರಪ್ರದೇಶ)ನಲ್ಲಿ ಮತಾಂಧರಿಂದ ದೇವಸ್ಥಾನದ ಅರ್ಚಕನ ಹತ್ಯೆ

ಇಲ್ಲಿಯ ಒಂದು ಶಿವ ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷ ಹಾಗೂ ಅರ್ಚಕರೆಂದು ಕಾರ್ಯ ಮಾಡುವ ಕಾಂತಿ ಪ್ರಸಾದ ಈ ಸಾಧುವನ್ನು ಮತಾಂಧ ಮುಸಲ್ಮಾನ ಯುವಕರು ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ನಾಯಕನ ಅಪಹರಣ

ಕಾಶ್ಮೀರದ ಸೊಪೊರದ ಭಾಜಪ ಮುಖಂಡ ಹಾಗೂ ಅಲ್ಲಿಯ ‘ಮ್ಯುನ್ಸಿಪಲ್ ಕಮಿಟಿ’ಯ ಉಪಾಧ್ಯಕ್ಷ ಮೆಹರಾಜುದ್ದೀನ ಮಲ್ಲಾರನ್ನು ಜುಲೈ ೧೫ ರಂದು ಬೆಳಗ್ಗೆ ಭಯೋತ್ಪಾದಕರು ಅಪಹರಣ ಮಾಡಿರುವ ಘಟನೆ ನಡೆದಿದೆ. ಬೆಳಗ್ಗೆ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಜ್ಞಾತರು ಚತುಶ್ಚಕ್ರ ವಾಹನದಿಂದ ಅಡ್ಡಗಟ್ಟಿ ಅವರ ಅಪಹರಣ ಮಾಡಿದರು.