‘ಇನ್‌ಕ್ವಿಝಿಶನ್ ಹೆಸರಿನಲ್ಲಿ ಗೋಮಾಂತಕರ ಮೇಲೆ ಮಿಶನರಿಗಳ ದೌರ್ಜನ್ಯ ವಿಷಯದ ಚಿತ್ರಪ್ರದರ್ಶನದ ಲೋಕರ್ಪಣೆ !

ಗೋವಾ ಇನ್‌ಕ್ವಿಝಿಶನ್ ಇತಿಹಾಸದ ದುರ್ಲಭ ಪುರಾವೆಯಾದ ‘ಹಾತ ಕಾತರೊ ಕಂಬವು ಹಳೆ ಗೋವಾದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಈ ಕಂಬದ ಇತಿಹಾಸ ಪುರಾತತ್ವ ಖಾತೆಯಿಂದ ತೆಗೆದು ಹಾಕುವ ಷಡ್ಯಂತ್ರ ಈಗ ಪ್ರಾರಂಭವಾಗಿದೆ. ಈ ರೀತಿಯ ಕಂಬ ಗೋವಾದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲವೆಂದು ಪುರಾತತ್ವ ಇಲಾಖೆ ಹೇಳುತ್ತಿದೆ. ‘ಹಾತ ಕಾತರೊ ಕಂಬ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು.

ಕೇರಳದ ಆಡಳಿತಾರೂಢ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನಾಯಕನಿಂದ ಪೊಲೀಸ್ ಅಧಿಕಾರಿಗಳಿಗೆ ಜೀವಬೆದರಿಕೆ

ರಾಜ್ಯದ ಆಢಳಿತಾರೂಢ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ (‘ಮಾಕಪ’ನ) ನಾಯಕನು ವಂದಿಪೇರಿಯಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ಮಾಕಪ ನ ಇಡುಕ್ಕಿ ಜಿಲ್ಲಾ ಸಚಿವಾಲಯದ ಸದಸ್ಯ ಆರ್. ಥಿಲಕನ್, ಪಿರಮೆದು ಪ್ರದೇಶ ಸಚಿವ ಜಿ. ವಿಜಯಾನಂದ ಮತ್ತು ರೆನಿಲ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.

ಗುಜರಾತ್‌ನಲ್ಲಿ ಆಯುರ್ವೇದ ಚಿಕಿತ್ಸೆಯ ನಂತರ ಒಂದೂವರೆ ಸಾವಿರಕ್ಕೂ ಹೆಚ್ಚು ರೋಗಿಗಳು ಕೊರೋನಾದಿಂದ ಮುಕ್ತ !

ಕೊರೋನಾದ ಮೇಲಿನ ಲಸಿಕೆ ಜಗತ್ತಿನಲ್ಲಿ ಎಲ್ಲಿಯೂ ಲಭ್ಯವಿಲ್ಲದ ಕಾರಣ ರೋಗಿಗಳ ಮೇಲೆ ಪರಿಣಾಮಕಾರಿ ಚಿಕಿತ್ಸೆಗೆ ಇನ್ನೂ ಮಿತಿಗಳಿವೆ. ಆದ್ದರಿಂದ ಭಾರತದ ಗುಜರಾತ ಸರಕಾರವು ಕೊರೋನಾ ರೋಗಿಗಳಿಗೆ ಆಯುರ್ವೇದದ ಚಿಕಿತ್ಸೆ ನೀಡುತ್ತಿದೆ. ಗುಜರಾತ ಸರಕಾರ ಮೇ ೧೫ ರಿಂದ ಇಂತಹ ರೋಗಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಅನುಮತಿ ನೀಡಿದ ಮೇಲೆ ಉತ್ತಮ ಪರಿಣಾಮ ಕಂಡುಬರುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ.

ಕಾಶ್ಮೀರದಲ್ಲಿ ನುಸುಳುಸುತ್ತಿದ್ದ ೧೩ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಮೆಂಢರ್ ಸೆಕ್ಟರ್‌ನ ನಿಯಂತ್ರಣ ರೇಖೆ ಬಳಿ ಸೈನಿಕರು ನುಸುಳುತ್ತಿದ್ದ ೧೩ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ, ಎಂದು ‘ಅಮರ್ ಉಜಲಾ’ ದಿನಪತ್ರಿಕೆ ವರದಿ ಮಾಡಿದೆ. ಮೆಂಢರ ಸೆಕ್ಟರಿನ ಗಡಿಯಾಚೆಗಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿಖಿಯಾಲ್ ಪ್ರದೇಶದಲ್ಲಿ ಭಯೋತ್ಪಾದಕರ ೩ ‘ಲಾಂಚಿಂಗ್ ಪ್ಯಾಡ್’(ತರಬೇತಿ ಪಡೆದ ಭಯೋತ್ಪಾದಕರನ್ನು ನುಸುಳಲು ಗಡಿಯ ಹತ್ತಿರ ತಾಣದಲ್ಲಿ ಒಟ್ಟಿಗೆ ಸೇರಿಸುತ್ತಾರೆ

ಕೇಂದ್ರ ಸರ್ಕಾರದಿಂದ ‘WeTransfer’ ಮೇಲೆ ನಿಷೇಧ

ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ‘WeTransfer’ ಈ ‘ಫೈಲ್-ಶೇರಿಂಗ್’ ಜಾಲತಾಣವನ್ನು ನಿಷೇಧಿಸಿದೆ. ಇದರ ಹಿಂದಿನ ಕಾರಣವನ್ನು ಸ್ಪಷ್ಟಪಡಿಸದಿದ್ದರೂ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಿಷೇಧವನ್ನು ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರು ಈ ಜಾಲತಾಣವನ್ನು ಬಳಸುತ್ತಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವ ೬ ಕಳ್ಳಸಾಗಾಣಿಕೆದಾರರ ಬಂಧನ

ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡುವವ ಆರು ಜನರನ್ನು ಬಂಧಿಸಿವೆ. ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ಸಹ ವಶಪಡಿಸಿಕೊಳ್ಳಲಾಗಿದೆ. ಮುದಾಸ್ಸಿರ್ ಫಯಾಜ್, ಶಬೀರ್, ಸಾಗೀರ್ ಅಹ್ಮದ್ ಪೊಸವಾಲ್, ಇಸಾಕ್ ಭಟ್ಟ ಮತ್ತು ಅರ್ಷಿದ್ ಬಂಧಿತರು.

ಬೇಹುಗಾರಿಕೆ ಮಾಡುತ್ತಿದ್ದ ಪಾಕ್ ರಾಯಬಾರಿ ಕಛೇರಿಯ ನೌಕರರ ಬಂಧಿಸಲಾಗಿದೆ

ಪಾಕಿಸ್ತಾನಿ ರಾಯಬಾರಿ ಕಛೇರಿಯ ಇಬ್ಬರು ಪಾಕಿಸ್ತಾನಿ ನೌಕರರನ್ನು ಬೇಹುಗಾರಿಕೆಯ ಪ್ರಕರಣದಲ್ಲಿ ದೆಹಲಿಯ ಪೊಲೀಸರ ವಿಶೇಷ ತಂಡವು ಬಂಧಿಸಿದೆ. ಅಬಿದ್ ಹುಸೇನ್ (ವಯಸ್ಸು ೪೨ ವರ್ಷ) ಮತ್ತು ತಾಹಿರ್ ಖಾನ್ (ವಯಸ್ಸು ೪೪) ಮತ್ತು ಅವರ ಚಾಲಕ ಜಾವೇದ್ ಹುಸೇನ್‌ನನ್ನೂ ಬಂಧಿಸಲಾಗಿದೆ. ಅಬಿದ್ ಮತ್ತು ತಾಹಿರ್ ಇಬ್ಬರೂ ಪಾಕನ ಗೂಢಾಚಾರ ಸಂಸ್ಥೆ ಐ.ಎಸ್.ಐಯ ಅಧಿಕಾರಿಗಳಾಗಿದ್ದಾರೆ.

ಬಾಬರಿ ಮಸೀದಿ ಕೆಡವಿದವರ ವಿರುದ್ಧದ ಮೊಕದ್ದಮೆಯನ್ನು ವಜಾಗೊಳಿಸಿ ! – ಬಾಬರಿ ಮಸೀದಿಯ ಪಕ್ಷಕಾರ ಇಕ್ಬಾಲ್ ಅನ್ಸಾರಿ ಅವರ ಬೇಡಿಕೆ

ರಾಮಜನ್ಮಭೂಮಿ ಖಟ್ಲೆಯ ತೀರ್ಪು ಬಂದು ರಾಮ ಮಂದಿರದ ಮಾರ್ಗವು ಸುಗಮವಾಗಿದೆ. ದೇವಸ್ಥಾನದ ನಿರ್ಮಾಣ ಕಾರ್ಯವೂ ಪ್ರಾರಂಭವಾಗಿದೆ. ಆದ್ದರಿಂದ ಇಂತಹ ಸಮಯದಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಬಗ್ಗೆ ಕೇಂದ್ರ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಖಟ್ಲೆಯನ್ನು ತಕ್ಷಣ ಕೈಬಿಡಬೇಕೆಂದು ಬಾಬರಿ ಮಸೀದಿಯ ಪಕ್ಷಕಾರ ಇಕ್ಬಾಲ್ ಅನ್ಸಾರಿ ಒತ್ತಾಯಿಸಿದ್ದಾರೆ.

ದೆಹಲಿಯ ಮರಕಝನ ಕಾರ್ಯಕ್ರಮವನ್ನು ಆ ಸಮಯದಲ್ಲೇ ನಿಲ್ಲಿಸುತ್ತಿದ್ದರೆ, ದೇಶದಲ್ಲಿ ಕರೋನದ ಪ್ರಮಾಣ ಹೆಚ್ಚಾಗುತ್ತಿರಲಿಲ್ಲ! – ಅಮಿತ್ ಷಾ ಸ್ವೀಕೃತಿ

ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲಿಘಿ ಜಮಾತ್ ಮರಕಝನಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯುತ್ತವೆ. ಅವು ಸಾರ್ವಜನಿಕ ಕಾರ್ಯಕ್ರಮವಾಗಿರದೇ, ಅವು ಮರಕಝದೊಳಗೆ ನಡೆಯುತ್ತವೆ. ಆದ್ದರಿಂದ ನಾವು ಈ ಕಾರ್ಯಕ್ರಮಗಳನ್ನು ಆ ಸಮಯದಲ್ಲೇ ನಿಲ್ಲಿಸುತ್ತಿದ್ದರೆ ಹಾಗೂ ಅಲ್ಲಿನ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ್ದರೆ, ದೇಶದಲ್ಲಿ ಕರೋನಾದ ಹಾವಳಿ ಹೆಚ್ಚಾಗಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರಲಿಲ್ಲ

ಕರೋನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರವಾಗಿ ಹೋರಾಡಬೇಕು ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಕರೋನಾದಿಂದ ಉಂಟಾಗುವ ಸಾವಿನ ಪ್ರಮಾಣ ನಮ್ಮ ದೇಶದಲ್ಲಿ ಕಡಿಮೆ ಇದೆ. ಇದರಿಂದಾದ ಹಾನಿಗಾಗಿ ಎಲ್ಲರಿಗೂ ದುಃಖ ಇದೆ; ಇದರ ಹೊರತಾಗಿಯೂ ನಮಗೆ ಏನೆಲ್ಲಾ ಉಳಿಸಲು ಸಾಧ್ಯವಾಯಿತೋ ಅದು ಖಂಡಿತವಾಗಿಯೂ ದೇಶದ ಸಾಮೂಹಿಕ ಸಂಕಲ್ಪಶಕ್ತಿಯ ಪರಿಣಾಮವಾಗಿದೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದರು.