ಗೋಪಾಲಗಂಜ(ಬಿಹಾರ)ನಲ್ಲಿ ೨೬೪ ಕೋಟಿ ಖರ್ಚು ಮಾಡಿ ನಿರ್ಮಿಸಿದ ಸೇತುವೆ ಅತೀವೃಷ್ಟಿಯಿಂದಾಗಿ ೨೯ ದಿನಗಳಲ್ಲೇ ಕೊಚ್ಚಿಹೋಯಿತು !

ಇಲ್ಲಿ ೨೬೪ ಕೋಟಿ ಖರ್ಚು ಮಾಡಿ ಗಂಧಕ ನದಿಯ ಮೇಲೆ ಕಟ್ಟಿದ್ದ ಸತ್ತರಘಾಟ ಸೇತುವೆಯು ಅತೀವೃಷ್ಟಿಯಿಂದಾಗಿ ೨೯ ದಿನಗಳಲ್ಲೇ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಇದರಿಂದ ಲಾಲಛಾಪಾರ, ಮುಜಫ್ಫರಪುರ, ಮೋತಿಹಾರಿ ಹಾಗೂ ಬೇತಿಯಾ ಈ ಊರುಗಳ ಸಂಪರ್ಕ ಕಡಿತಗೊಂಡಿದೆ. ೨೯ ದಿನಗಳ ಹಿಂದೆ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಈ ಸೇತುವೆಯನ್ನು ‘ವಿಡಿಯೋ ಕಾನ್ಫರೆನ್ಸ್’ ಮೂಲಕ ಉದ್ಘಾಟಿಸಿದ್ದರು.

ದೇಶದಲ್ಲಿ ಸಪ್ಟೆಂಬರ್ ೧ ರ ತನಕ ಕೊರೋನಾ ೩೫ ಲಕ್ಷ ರೋಗಿಗಳಾಗಬಹುದು ! – ‘ಭಾರತೀಯ ವಿಜ್ಞಾನ ಸಂಸ್ಥೆ’ಯ ಅಂದಾಜು

ಬೆಂಗಳೂರು – ದೇಶದಲ್ಲಿ ಸಪ್ಟೆಂಬರ್ ೧ ರ ತನಕ ಕೊರೋನಾ ಪೀಡಿತರ ಸಂಖ್ಯೆ ೩೫ ಲಕ್ಷಕ್ಕಿಂತಲೂ ಹೆಚ್ಚಾಗಬಹುದು ಹಾಗೂ ೧೦ ಲಕ್ಷ ಸಕ್ರಿಯ ರೋಗಿಗಳೂ (ಎಕ್ಟಿವ್ ಕೇಸಸ್) ಆಗುವರು ಎಂದು ‘ಭಾರತೀಯ ವಿಜ್ಞಾನ ಸಂಸ್ಥೆ’ಯು ಅಂದರೆ ‘ಐ.ಐ.ಎಸ್.ಸಿ.’ನ ಪ್ರಾಧ್ಯಾಪಕರಾದ ಶಶಿಕುಮಾರ ಜಿ., ಪ್ರಾಧ್ಯಾಪಕ ದೀಪಕ ಎಸ್. ಹಾಗೂ ಅವರ ಸರಕಾರಿಗಳು ಅಂದಾಜಿಸಿದ್ದಾರೆ. (ಸೌಜನ್ಯ : NEWS9 live) ಈ ಸಂಸ್ಥೆಯ ಅಧ್ಯಯನದ ಪ್ರಕಾರ, ೧. ಸಪ್ಟೆಂಬರ ೧ ರ ತನಕ ಮಹಾರಾಷ್ಟ್ರದಲ್ಲಿ ರೋಗಿಗಳ ಸಂಖ್ಯೆ ೬ ಲಕ್ಷ … Read more

ನಟ ಸುಶಾಂತ್ ರಾಜಪುತನ ಆತ್ಮಹತ್ಯೆಯ ತನಿಖೆಯನ್ನು ಸಿಬಿಐಗೆ ನೀಡಿ ! – ಡಾ. ಸುಬ್ರಮಣಿಯನ್ ಸ್ವಾಮಿಯಿಂದ ಮೋದಿಗೆ ಪತ್ರ

ನಟ ಸುಶಾಂತ ಸಿಂಹ ರಾಜಪುತ ಇವರ ಆತ್ಮಹತ್ಯೆಯ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ನೀಡಬೇಕು, ಎಂದು ಭಾಜಪದ ಹಿರಿಯ ನಾಯಕ ಹಾಗೂ ಶಾಸಕ ಡಾ. ಸುಬ್ರಮಣಿಯನ್ ಸ್ವಾಮಿ ಇವರು ಪತ್ರದ ಮೂಲಕ ಪ್ರಧಾನಿ ಮೋದಿಯವರಿಗೆ ಆಗ್ರಹಿಸಿದ್ದಾರೆ. ‘ಹಿಂದಿ ಚಿತ್ರರಂಗದ ದೊಡ್ಡ ವ್ಯಕ್ತಿಗಳು ಈ ಬಗ್ಗೆ ಒತ್ತಡವನ್ನು ತರಲು ದುಬೈಯ ಕುಖ್ಯಾತ ಗೂಂಡಾಗಳ ಸಂಪರ್ಕದಲ್ಲಿದ್ದಾರೆ’, ಎಂದೂ ಅವರು ಈ ಪತ್ರದಲ್ಲಿ ಹೇಳಿದ್ದಾರೆ.

ಇನ್ನು ಕೊರೋನಾದಿಂದ ಕೇವಲ ಭಗವಂತನೇ ಕಾಪಾಡಬಹುದು ! – ಆರೋಗ್ಯ ಸಚಿವ ಬಿ. ಶ್ರೀರಾಮುಲು

ಹೆಚ್ಚಾಗುತ್ತಿರುವ ಕೊರೋನಾದ ಹಾವಳಿಯಿಂದ ಇನ್ನು ಕೇವಲ ಭಗವಂತನೇ ಕಾಪಾಡಬಹುದು, ಎಂದು ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಇವರು ನುಡಿದಿದ್ದಾರೆ. ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಸದ್ಯ ಕರ್ನಾಟಕದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಒಟ್ಟು ೪೭ ಸಾವಿರದ ೨೫೩ ರಷ್ಟಿದೆ. ಈ ಪೈಕಿ ೧೮ ಸಾವಿರದ ೪೬೬ ರೋಗಿಗಳು ಗುಣಮುಖರಾಗಿ ಮನೆಗೆ ಹೋಗಿದ್ದಾರೆ.

ಮಿರತ (ಉತ್ತರಪ್ರದೇಶ)ನಲ್ಲಿ ಮತಾಂಧರಿಂದ ದೇವಸ್ಥಾನದ ಅರ್ಚಕನ ಹತ್ಯೆ

ಇಲ್ಲಿಯ ಒಂದು ಶಿವ ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷ ಹಾಗೂ ಅರ್ಚಕರೆಂದು ಕಾರ್ಯ ಮಾಡುವ ಕಾಂತಿ ಪ್ರಸಾದ ಈ ಸಾಧುವನ್ನು ಮತಾಂಧ ಮುಸಲ್ಮಾನ ಯುವಕರು ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ನಾಯಕನ ಅಪಹರಣ

ಕಾಶ್ಮೀರದ ಸೊಪೊರದ ಭಾಜಪ ಮುಖಂಡ ಹಾಗೂ ಅಲ್ಲಿಯ ‘ಮ್ಯುನ್ಸಿಪಲ್ ಕಮಿಟಿ’ಯ ಉಪಾಧ್ಯಕ್ಷ ಮೆಹರಾಜುದ್ದೀನ ಮಲ್ಲಾರನ್ನು ಜುಲೈ ೧೫ ರಂದು ಬೆಳಗ್ಗೆ ಭಯೋತ್ಪಾದಕರು ಅಪಹರಣ ಮಾಡಿರುವ ಘಟನೆ ನಡೆದಿದೆ. ಬೆಳಗ್ಗೆ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಜ್ಞಾತರು ಚತುಶ್ಚಕ್ರ ವಾಹನದಿಂದ ಅಡ್ಡಗಟ್ಟಿ ಅವರ ಅಪಹರಣ ಮಾಡಿದರು.

ರಾಮಜನ್ಮಭೂಮಿಯಲ್ಲಿ ಬೌದ್ಧ ದೇವಸ್ಥಾನವಿತ್ತು ಎಂದು ಹೇಳುತ್ತಾ ಬೌದ್ಧ ಭಿಕ್ಷುವಿನಿಂದ ಆಮರಣ ಉಪವಾಸ

ಅಯೋಧ್ಯೆಯ ರಾಮಮಂದಿರದ ಸ್ಥಳ ಹಾಗೂ ಸಂಪೂರ್ಣ ಪರಿಸರವು ಬೌದ್ಧ ಮಂದಿರದ ಪರಿಸರವಾಗಿದ್ದು ‘ರಾಮಮಂದಿರದ ಸ್ಥಳದಲ್ಲಿ ಪ್ರಾಚೀನ ಬುದ್ಧ ಮಂದಿರವಾಗಿತ್ತು’, ಎಂದು ಭಾರತೀಯ ಬೌದ್ಧ ಭಿಕ್ಷು ಹೇಳಿಕೊಂಡಿದ್ದಾರೆ. ‘ರಾಮಜನ್ಮಭೂಮಿ ಕ್ಷೇತ್ರ ಇದು ಪ್ರಾಚೀನ ಬೌದ್ಧ ಸ್ಥಳವಾಗಿದ್ದು ಅದು ಪ್ರಸಿದ್ಧ ಸಾಕೇತ ಪಟ್ಟಣವಾಗಿತ್ತು. ರಾಮಮಂದಿರದ ಕೆಲಸವನ್ನು ಕೂಡಲೇ ನಿಲ್ಲಿಸಿ ಈ ಸ್ಥಳವನ್ನು ಬುದ್ಧ ಮಂದಿರಕ್ಕೆ ಹಿಂದಿರುಗಿಸಬೇಕು

ಕೊರೋನಾದ ೨ ಭಾರತೀಯ ಲಸಿಕೆಗಳಿಂದ ಪ್ರಾಣಿಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಿದೆ, ಇನ್ನು ಮನುಷ್ಯರ ಮೇಲೆ ಪರೀಕ್ಷಣೆ ಮಾಡಲಾಗುವುದು

ಕೊರೋನಾದ ಮೇಲೆ ೨ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಣಿಯ ಮೇಲೆ ಅದರ ಯಶಸ್ವಿ ಪ್ರಯೋಗದ ನಂತರ ಮನುಷ್ಯನ ಮೇಲೆಯೂ ಪರೀಕ್ಷಣೆ ಮಾಡಲು ಅನುಮತಿಯನ್ನು ನೀಡಿದೆ. ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (‘ಐ.ಸಿ.ಎಮ್.ಆರ್.’ನ) ಮಹಾನಿರ್ದೇಶಕ ಬಲರಾಮ ಭಾರ್ಗವ ಇವರು ಮಾಹಿತಿ ನೀಡಿದರು. ಈ ಲಸಿಕೆಯನ್ನು ನಿರ್ಮಿಸಲು ಎಷ್ಟು ಕಾಲಾವಧಿ ಬೇಕಾಗಬಹುದು? ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಆಜಾನ್‌ಗಾಗಿ ಬೊಂಗಾವನ್ನು ಉಪಯೋಗಿಸುವ ಬಗ್ಗೆ ವಿರೋಧಿಸಿದ ಹಿಂದೂ ಯುವತಿಗೆ ಮತಾಂಧರಿಂದ ಅತ್ಯಾಚಾರದ ಬೆದರಿಕೆ

ಆಜಾನ್‌ಗಾಗಿ ಬೊಂಗಾ ಬಳಸುವುದನ್ನು ವಿರೋಧಿಸಿದ ಹಿಂದೂ ಯುವತಿಗೆ ಮತಾಂಧರು ಅತ್ಯಾಚಾರದ ಬೆದರಿಕೆಯೊಡ್ಡಿದ ಖೇದಕರ ಘಟನೆ ಬೆಳಕಿಗೆ ಬಂದಿದೆ. ಓರ್ವ ಹಿಂದೂ ಯುವತಿಯು ಸಾಮಾಜಿಕ ಮಾಧ್ಯಮಗಳಲ್ಲಿ ಕೈಯಲ್ಲಿ ಫಲಕವನ್ನು ಹಿಡಿದು ಅದರಲ್ಲಿ ‘ಆಜಾನ್ ನೀಡಿ ಆದರೆ ಧ್ವನಿ ಕಡಿಮೆ ಮಾಡಿ. ಧ್ವನಿವರ್ಧಕದಿಂದ ನೀವು ಏನು ಸಾಧಿಸಲಿದ್ದೀರಿ ?’, ಎಂಬ ಸಂದೇಶವನ್ನು ಬರೆದಿರುವ ಚಿತ್ರ ಪ್ರಸಾರವಾಗಿತ್ತು.

ಕಾಂಗ್ರೆಸ್ಸಿನ ರಾಷ್ಟ್ರದ್ವೇಷ !

ಪ್ರಧಾನಮಂತ್ರಿ ಮೋದಿಯವರು ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿರುವ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಕಾಂಗ್ರೆಸ್ಸಿಗೆ ತೀವ್ರ ಹೊಟ್ಟೆನೋವು ಆರಂಭವಾಯಿತು. ಕಾಂಗ್ರೆಸ್ ಈ ಛಾಯಾಚಿತ್ರಗಳನ್ನು ‘ಪೋಸ್ಟ್‌ಮಾರ್ಟಮ್ ಮಾಡಿ ಏನೋ ರಹಸ್ಯವನ್ನು ಕಂಡು ಹಿಡಿಯಿತಂತೆ.