ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದಿಂದ ರಾಜ್ಯ ಗಳಿಗೆ ವಿಚಾರಣೆ ನಡೆಸುವ ಆದೇಶ !
ನವದೆಹಲಿ -ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗವು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಿಗೆ ನೋಟಿಸ್ ನೀಡಿ ಮದರಸಾಗಳಲ್ಲಿ ಶಿಕ್ಷಣ ಪಡೆಯುವ ಮುಸಲ್ಮಾನೆತರ ಮಕ್ಕಳ ವಿಸ್ತೃತ ವಿಚಾರಣೆ ನಡೆಸುವ ಆದೇಶ ನೀಡಿದೆ. ವಿಚಾರಣೆಯ ನಂತರ ಈ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ಪ್ರವೇಶ ನೀಡುವುದಕ್ಕೆ ಕೂಡ ಆದೇಶ ನೀಡಿದೆ. ಇದರ ಜೊತೆಗೆ ರಾಜ್ಯದ ಮುಖ್ಯ ಸಚಿವರಿಗೆ ಮದರಸಾದ ನೋಂದಣಿ ಮಾಡಿಸಲು ಸಹ ಹೇಳಲಾಗಿದೆ.
NCPCR writes to Chief Secys of all States/UTs, recommending conducting a detailed inquiry of all govt funded/recognized madrasas that are admitting non-Muslim children & admit all such children in schools subsequent to the inquiry; also recommends mapping of all unmapped madrasas pic.twitter.com/y2DYNMdWfu
— ANI (@ANI) December 9, 2022
ಮುಸಲ್ಮಾನೇತರ ಮಕ್ಕಳಿಗೆ ಸರಕಾರಿ ಅನುದಾನ ಇರುವ ಮದರಸಾದಲ್ಲಿ ಪ್ರವೇಶ ನೀಡಲಾಗುತ್ತಿದ್ದು ಅವರಿಗೆ ಶಿಷ್ಯ ವೇತನ ಕೂಡ ದೊರೆಯುತ್ತಿದೆ. ಇಲ್ಲಿ ಮುಸಲ್ಮಾನೇತರ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಇದು ಸಂವಿಧಾನದ ಕಲಂ ೨೮(೩) ರ ನೇೆರ ಉಲ್ಲಂಘನೆ ಆಗಿದೆ ಎಂದು ಆಯೋಗವು ನೋಟಿಸಿಗೆ ನೀಡಿದ ಉತ್ತರದಲ್ಲಿ ತಿಳಿಸಿದೆ.
ಸಂಪಾದಕೀಯ ನಿಲುವುಈ ರಾಜ್ಯಗಳಿಗೆ ಸ್ವತಃ ಏಕೆ ತಿಳಿಯುವುದಿಲ್ಲ ? ಹಿಂದೂಗಳ ಸಂಘಟನೆಗಳು ಸಹ ಇದರ ಕಡೆ ಗಮನ ನೀಡುವ ಅವಶ್ಯಕತೆ ಇದೆ. ಮುಸಲ್ಮಾನರಿಗೆ ಮದರಸಾದಿಂದ ಯಾವ ರೀತಿ ಧರ್ಮಶಿಕ್ಷಣ ಸಿಗುತ್ತದೆ ಹಾಗೆ ಹಿಂದೂಗಳಿಗೆ ಕೂಡ ಸಿಗುವುದಕ್ಕಾಗಿ ಹಿಂದೂಗಳ ಸಂಘಟನೆಗಳು ಇನ್ನು ಮುಂದೆ ಸಮರೋಪಾದಿಯಲ್ಲಿ ಪ್ರಯತ್ನಿಸುವುದು ಅವಶ್ಯಕವಾಗಿದೆ. |