
ಕೊಲಕಾತಾ – ಬಂಗಾಳದಲ್ಲಿನ ಮಾಲದಾ ಜಿಲ್ಲೆಯಲ್ಲಿನ ಸುಖದೇವಪುರದಲ್ಲಿರುವ ಭಾರತ-ಬಾಂಗ್ಲಾದೇಶ ಅಂತರಾಷ್ಟ್ರೀಯ ಗಡಿಯ ಬಳಿ ಭಾರತೀಯ ಸುರಕ್ಷಾ ದಳದ ಸೈನಿಕರು ೩೫೯ ಮೊಬೈಲುಗಳನ್ನು ಜಪ್ತು ಮಾಡಿದ್ದಾರೆ. ಸುಖದೇವಪುರದಲ್ಲಿನ ಗಡಿಯ ಚೌಕಿಯಲ್ಲಿ ನೇಮಕಗೊಂಡಿರುವ ಸೈನಿಕರಿಗೆ ೧೦-೧೨ ಕಳ್ಳಸಾಗಣಿಕೆ ಮಾಡುವವರು ಕೆಲವು ಗಂಟುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಾಣಿಸಿತು. ತಮ್ಮ ದಿಕ್ಕಿನಲ್ಲಿ ಸೈನಿಕರು ಬರುತ್ತಿರುವುದನ್ನು ನೋಡಿ ಕತ್ತಲು ಹಾಗೂ ಗಿಡಗಂಟಿಗಳ ಲಾಭ ಪಡೆದು ಕಳ್ಳರು ಓಡಿಹೋದರು. ನಂತರ ನಡೆಸಲಾದ ಹುಡುಕಾಟದಲ್ಲಿ ಸೈನಿಕರಿಗೆ ತಂತಿಯ ಗೋಡೆಯ ಬಳಿ ಇರುವ ಹೊಂಡದಲ್ಲಿ ೮ ಗಂಟುಗಳು ದೊರೆತವು. ಗಡಿ ಭದ್ರತಾ ಪಡೆಯ ಮೂಲಗಳಿಂದ ‘ಇವುಗಳಲ್ಲಿ ವಿವಿಧ ಸಂಸ್ಥೆಗಳ ೩೫೯ ಮೊಬೈಲಗಳಿದ್ದವು ಹಾಗೂ ಅವುಗಳ ಬೆಲೆಯು ಅಂದಾಜಿನಲ್ಲಿ ೩೯ ಲಕ್ಷದ ೨೯ ಸಾವಿರ ರೂಪಾಯಿಗಳಾಗಿದೆ, ಎಂಬ ಮಾಹಿತಿ ದೊರೆತಿದೆ. ಈ ಕಳ್ಳಸಾಗಾಣಿಕೆಯಲ್ಲಿ ಸಹಭಾಗಿಯಾಗಿರುವ ಅನೇಕ ಕಳ್ಳರ ಹೆಸರುಗಳು ಕಂಡುಬಂದಿದ್ದು ಅವರ ವಿರುದ್ಧ ವೈಷ್ಣವನಗರ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಹಾಗೆಯೇ ಜಪ್ತು ಮಾಡಿರುವ ಮೊಬೈಲಗಳನ್ನು ಮುಂದಿನ ಕಾನೂನಾತ್ಮಕ ಕಾರ್ಯಾಚರಣೆಗಾಗಿ ಪೊಲೀಸ ಠಾಣೆಯಲ್ಲಿ ಜಮೆ ಮಾಡಲಾಗಿದೆ.
ಗಡಿ ಭದ್ರತಾ ಪಡೆಯು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆಯುವ ಕಳ್ಳಸಾಗಾಣಿಕೆಯನ್ನು ನಿಲ್ಲಿಸಲು ಕಠೋರ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕಳ್ಳತನದ ಕಾರ್ಯಾಚರಣೆಯಲ್ಲಿ ಭಾಗಿಯಾದ ಕೆಲವರನ್ನು ಬಂಧಿಸಲಾಗಿದೆ, ಎಂಬ ಮಾಹಿತಿಯನ್ನು ಗಡಿ ಭದ್ರತಾ ಪಡೆಯ ಅಧಿಕಾರಿಗಳು ನೀಡಿದ್ದಾರೆ.
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!