
ಕೊಲಕಾತಾ – ಬಂಗಾಳದಲ್ಲಿನ ಮಾಲದಾ ಜಿಲ್ಲೆಯಲ್ಲಿನ ಸುಖದೇವಪುರದಲ್ಲಿರುವ ಭಾರತ-ಬಾಂಗ್ಲಾದೇಶ ಅಂತರಾಷ್ಟ್ರೀಯ ಗಡಿಯ ಬಳಿ ಭಾರತೀಯ ಸುರಕ್ಷಾ ದಳದ ಸೈನಿಕರು ೩೫೯ ಮೊಬೈಲುಗಳನ್ನು ಜಪ್ತು ಮಾಡಿದ್ದಾರೆ. ಸುಖದೇವಪುರದಲ್ಲಿನ ಗಡಿಯ ಚೌಕಿಯಲ್ಲಿ ನೇಮಕಗೊಂಡಿರುವ ಸೈನಿಕರಿಗೆ ೧೦-೧೨ ಕಳ್ಳಸಾಗಣಿಕೆ ಮಾಡುವವರು ಕೆಲವು ಗಂಟುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಾಣಿಸಿತು. ತಮ್ಮ ದಿಕ್ಕಿನಲ್ಲಿ ಸೈನಿಕರು ಬರುತ್ತಿರುವುದನ್ನು ನೋಡಿ ಕತ್ತಲು ಹಾಗೂ ಗಿಡಗಂಟಿಗಳ ಲಾಭ ಪಡೆದು ಕಳ್ಳರು ಓಡಿಹೋದರು. ನಂತರ ನಡೆಸಲಾದ ಹುಡುಕಾಟದಲ್ಲಿ ಸೈನಿಕರಿಗೆ ತಂತಿಯ ಗೋಡೆಯ ಬಳಿ ಇರುವ ಹೊಂಡದಲ್ಲಿ ೮ ಗಂಟುಗಳು ದೊರೆತವು. ಗಡಿ ಭದ್ರತಾ ಪಡೆಯ ಮೂಲಗಳಿಂದ ‘ಇವುಗಳಲ್ಲಿ ವಿವಿಧ ಸಂಸ್ಥೆಗಳ ೩೫೯ ಮೊಬೈಲಗಳಿದ್ದವು ಹಾಗೂ ಅವುಗಳ ಬೆಲೆಯು ಅಂದಾಜಿನಲ್ಲಿ ೩೯ ಲಕ್ಷದ ೨೯ ಸಾವಿರ ರೂಪಾಯಿಗಳಾಗಿದೆ, ಎಂಬ ಮಾಹಿತಿ ದೊರೆತಿದೆ. ಈ ಕಳ್ಳಸಾಗಾಣಿಕೆಯಲ್ಲಿ ಸಹಭಾಗಿಯಾಗಿರುವ ಅನೇಕ ಕಳ್ಳರ ಹೆಸರುಗಳು ಕಂಡುಬಂದಿದ್ದು ಅವರ ವಿರುದ್ಧ ವೈಷ್ಣವನಗರ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಹಾಗೆಯೇ ಜಪ್ತು ಮಾಡಿರುವ ಮೊಬೈಲಗಳನ್ನು ಮುಂದಿನ ಕಾನೂನಾತ್ಮಕ ಕಾರ್ಯಾಚರಣೆಗಾಗಿ ಪೊಲೀಸ ಠಾಣೆಯಲ್ಲಿ ಜಮೆ ಮಾಡಲಾಗಿದೆ.
ಗಡಿ ಭದ್ರತಾ ಪಡೆಯು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆಯುವ ಕಳ್ಳಸಾಗಾಣಿಕೆಯನ್ನು ನಿಲ್ಲಿಸಲು ಕಠೋರ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕಳ್ಳತನದ ಕಾರ್ಯಾಚರಣೆಯಲ್ಲಿ ಭಾಗಿಯಾದ ಕೆಲವರನ್ನು ಬಂಧಿಸಲಾಗಿದೆ, ಎಂಬ ಮಾಹಿತಿಯನ್ನು ಗಡಿ ಭದ್ರತಾ ಪಡೆಯ ಅಧಿಕಾರಿಗಳು ನೀಡಿದ್ದಾರೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ