ಹೊಸದೆಹಲಿ – ಭಾಜಪದಿಂದ ಅಮಾನತ್ತುಗೊಂಡಿರುವ ವಕ್ತಾರೆ ನೂಪುರ ಶರ್ಮಾ ಇವರು ಸುದ್ದಿವಾಹಿನಿಯ ಚರ್ಚಾಕೂಟದಲ್ಲಿ ಮಹಮ್ಮದ್ ಪೈಗಂಬರರ ಬಗ್ಗೆ ನೀಡಿರುವ ತಥಾಕಥಿತ ಅವಮಾನಕರ ಹೇಳಿಕೆಯಿಂದ ಅವರ ವಿರುದ್ಧ ದೇಶದ ೯ ಪೋಲಿಸ್ ಠಾಣೆಗಳಲ್ಲಿ ದೂರೂ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಶರ್ಮಾ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಿ ಈ ಎಲ್ಲಾ ದೂರುಗಳನ್ನು ದೆಹಲಿಗೆ ವರ್ಗಾಯಿಸಬೇಕೆಂದು ಕೇಳಿಕೊಂಡಿದ್ದರು. ಈ ಮನವಿಯ ಮೇಲೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಆಗಸ್ಟ್ ೧೦ ರ ವರೆಗೆ ಅವರ ಬಂಧನಕ್ಕೆ ತಡೆ ಹಾಕಿದೆ. ಹಿಂದೊಮ್ಮೆಯೂ ಶರ್ಮಾ ಇವರು ಜುಲೈ ೧ ರಂದು ಇದೇ ರೀತಿಯ ಮನವಿ ದಾಖಲಿಸಿದ್ದರು. ಆದರೆ ನ್ಯಾಯಾಲಯವು ಅದನ್ನು ಕೇಳಲು ನಿರಾಕರಿಸಿತ್ತು. ನ್ಯಾಯಾಲಯವು ‘ನಿಮ್ಮಿಂದ ದೇಶದ ಪರಿಸ್ಥಿತಿ ಹದಗೆಟ್ಟಿದೆ, ನೀವು ತಡವಾಗಿ ಕ್ಷಮೆಯಾಚಿಸಿದ್ದೀರಿ, ಅದೂ ಸಹ ಯಾರದೇ ಭಾವನೆ ನೋವಾಗಿದ್ದಲ್ಲಿ, ನಾನು ಈ ಹೇಳಿಕೆ ಹಿಂಪಡೆಯುತ್ತೇನೆ, ಎಂಬಂತೆ ಕೇಳಿದ್ದೀರಿ. ನೀವು ರಾಷ್ಟ್ರೀಯ ವಾಹಿನಿಗಳ ಮೇಲೆ ಹೋಗಿ ಸಂಪೂರ್ಣ ದೇಶದ ಕ್ಷಮೆ ಯಾಚಿಸಬೇಕು’ ಎಂದು ಹೇಳಿತ್ತು.
🚨Supreme Court bench of Justices Surya Kant & Pardiwala will hear former BJP leader Nupur Sharma’s plea seeking protection from arrest in as many as nine FIRs filed against her in several parts of India for her comments on a religious figure in Islam – Prophet Mohammad. pic.twitter.com/AbbO2lt5xS
— LawBeat (@LawBeatInd) July 19, 2022