ಶೇಖ ಹಸೀನಾ ಸರಕಾರ ಹಿಂದುಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ವಿಫಲ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಈ ವರ್ಷ ಜನವರಿ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರ ಶೇಖ ಹಸೀನಾ ಸರಕಾರ ಮತಾಂಧ ಮುಸಲ್ಮಾನರಿಂದ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುವ ದಾಳಿಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ.
೧. ಈ ಚುನಾವಣೆಯಲ್ಲಿ ಹಿಂದುಗಳು ಶೇಖ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಮತ ನೀಡಿದ್ದರು. ಚುನಾವಣೆಯ ಸಮಯದಲ್ಲಿ ಕೂಡ ಹಿಂದುಗಳ ಮೇಲೆ ದಾಳಿಗಳು ನಡೆದಿದ್ದವು ಮತ್ತು ಹಸಿನಾ ಅವರ ಪಕ್ಷ ಅಧಿಕಾರಕ್ಕೆ ಬಂದ ನಂತರವು ಕೂಡ ಈ ದಾಳಿಗಳು ಮುಂದುವರೆದಿದೆ ಆದ್ದರಿಂದ ಅಲ್ಲಿನ ಹಿಂದುಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
೨. ಹಿಂದೂ ಸಂಘಟನೆಗಳ ಆರೋಪವೇನೆಂದರೆ, ಚುನಾವಣೆಯ ನಂತರ ಪ್ರತಿ ದಿನ ಹಿಂದುಗಳ ಮೇಲೆ ೩ ದಾಳಿಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿನ ಕುಸ್ತಿಯ, ಭಾಗೇರಹಾಟ್, ಜೈನೆದಾಹ, ಗೈಬಾಂಧಾ, ಚಟಗಾವ ಮತ್ತು ಶಿಲಹಟ ಈ ೬ ಜಿಲ್ಲೆಗಳಲ್ಲಿ ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಿವೆ.
೩. ಹಿಂದೂ, ಬೌದ್ಧ, ಕ್ರಿಶ್ಚಿಯನ್ ಓಯಿಕ್ಯಾ ಪರಿಷತ್ತಿನ ಸದಸ್ಯ ರಂಜನ್ ಕರಮಾಕರ ಅವರು ಮಾತನಾಡಿ, ಚುನಾವಣೆಯ ನಂತರ ಅಲ್ಪಸಂಖ್ಯಾತರ ಮತ್ತು ದೇವಸ್ಥಾನಗಳ ಮೇಲೆ ನಡೆಯುವ ದಾಳಿಗಳು ಆಘಾತಕಾರಿಯಾಗಿವೆ. ಈ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೆ ಇರುವುದರಿಂದ ಅನೇಕ ಮತಾಂಧ ಸಂಘಟನೆಗಳ ಧೈರ್ಯ ಹೆಚ್ಚಾಗಿದೆ. ಭವಿಷ್ಯದಲ್ಲಿ ಇಂತಹ ದಾಳಿಗಳು ತಡೆಯುವುದಕ್ಕಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಕಳೆದ ೩ ತಿಂಗಳಲ್ಲಿ ನಡೆದಿರುವ ಕೆಲವು ದಾಳಿಗಳು :
- ಚಟಗಾವ ನ ಸೀತಾ ಕುಂಡದಲ್ಲಿನ ಬಾರಬನಲ ದೇವಸ್ಥಾನ ದ್ವಂಸ.
- ಮೌಲವಿ ಮಾರುಕಟ್ಟೆಯ ಶ್ರೀಕಾಳಿ ಮಂದಿರದಲ್ಲಿನ ಮೂರ್ತಿ ದ್ವಂಸ ಗೊಳಿಸಿ ಆಭರಣಗಳ ಕಳವು.
- ಗೋಪಾಲಗಂಜದ ಪ್ರಸ್ತುತ ಉಪಜಿಲ್ಹೆಯಲ್ಲಿನ ಮಹಿಳಾ ಅರ್ಚಕರ ಕತ್ತುಹಿಸಿಕಿ ಹತ್ಯೆ ಮತ್ತು ದೇವಿಯ ಬಂಗಾರದ ಆಭರಣಗಳ ಲೂಟಿ.
- ಸಿರಾಜಗಂಜದಲ್ಲಿನ ಶ್ರೀಕಾಳಿ ಮಾತಾ ದೇವಸ್ಥಾನದ ಮೇಲೆ ದಾಳಿ ನಡೆಸಿ ಒರ್ವ ಯುವಕನಿಂದ ಅನೇಕ ಮೂರ್ತಿಗಳ ವಿಡಂಬನೆ.
- ಬರಿಸಲಾದಲ್ಲಿ ರಾಧಾ ಗೋವಿಂದ ಸೇವಾಶ್ರಮ ದೇವಸ್ಥಾನದ ಮೇಲೆ ದಾಳಿ.
ಸಂಪಾದಕೀಯ ನಿಲುವುಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ ಹಸೀನಾ ಮತ್ತು ಭಾರತದ ನಡುವೆ ಒಳ್ಳೆಯ ಸಂಬಂಧವಿದೆ; ಆದರೆ ಅಲ್ಲಿಯ ಹಿಂದುಗಳಿಗೆ ಅದರ ಯಾವುದೇ ಲಾಭವಾಗದೆ ತದ್ವಿರುದ್ಧ ಹಿಂದೂಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಇದು ಭಾರತಕ್ಕೆ ನಾಚಿಕೆಗೇಡಾಗಿದೆ ! |
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು