ಶೇಖ ಹಸೀನಾ ಸರಕಾರ ಹಿಂದುಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ವಿಫಲ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಈ ವರ್ಷ ಜನವರಿ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರ ಶೇಖ ಹಸೀನಾ ಸರಕಾರ ಮತಾಂಧ ಮುಸಲ್ಮಾನರಿಂದ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುವ ದಾಳಿಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ.
೧. ಈ ಚುನಾವಣೆಯಲ್ಲಿ ಹಿಂದುಗಳು ಶೇಖ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಮತ ನೀಡಿದ್ದರು. ಚುನಾವಣೆಯ ಸಮಯದಲ್ಲಿ ಕೂಡ ಹಿಂದುಗಳ ಮೇಲೆ ದಾಳಿಗಳು ನಡೆದಿದ್ದವು ಮತ್ತು ಹಸಿನಾ ಅವರ ಪಕ್ಷ ಅಧಿಕಾರಕ್ಕೆ ಬಂದ ನಂತರವು ಕೂಡ ಈ ದಾಳಿಗಳು ಮುಂದುವರೆದಿದೆ ಆದ್ದರಿಂದ ಅಲ್ಲಿನ ಹಿಂದುಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
೨. ಹಿಂದೂ ಸಂಘಟನೆಗಳ ಆರೋಪವೇನೆಂದರೆ, ಚುನಾವಣೆಯ ನಂತರ ಪ್ರತಿ ದಿನ ಹಿಂದುಗಳ ಮೇಲೆ ೩ ದಾಳಿಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿನ ಕುಸ್ತಿಯ, ಭಾಗೇರಹಾಟ್, ಜೈನೆದಾಹ, ಗೈಬಾಂಧಾ, ಚಟಗಾವ ಮತ್ತು ಶಿಲಹಟ ಈ ೬ ಜಿಲ್ಲೆಗಳಲ್ಲಿ ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಿವೆ.
೩. ಹಿಂದೂ, ಬೌದ್ಧ, ಕ್ರಿಶ್ಚಿಯನ್ ಓಯಿಕ್ಯಾ ಪರಿಷತ್ತಿನ ಸದಸ್ಯ ರಂಜನ್ ಕರಮಾಕರ ಅವರು ಮಾತನಾಡಿ, ಚುನಾವಣೆಯ ನಂತರ ಅಲ್ಪಸಂಖ್ಯಾತರ ಮತ್ತು ದೇವಸ್ಥಾನಗಳ ಮೇಲೆ ನಡೆಯುವ ದಾಳಿಗಳು ಆಘಾತಕಾರಿಯಾಗಿವೆ. ಈ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೆ ಇರುವುದರಿಂದ ಅನೇಕ ಮತಾಂಧ ಸಂಘಟನೆಗಳ ಧೈರ್ಯ ಹೆಚ್ಚಾಗಿದೆ. ಭವಿಷ್ಯದಲ್ಲಿ ಇಂತಹ ದಾಳಿಗಳು ತಡೆಯುವುದಕ್ಕಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಕಳೆದ ೩ ತಿಂಗಳಲ್ಲಿ ನಡೆದಿರುವ ಕೆಲವು ದಾಳಿಗಳು :
- ಚಟಗಾವ ನ ಸೀತಾ ಕುಂಡದಲ್ಲಿನ ಬಾರಬನಲ ದೇವಸ್ಥಾನ ದ್ವಂಸ.
- ಮೌಲವಿ ಮಾರುಕಟ್ಟೆಯ ಶ್ರೀಕಾಳಿ ಮಂದಿರದಲ್ಲಿನ ಮೂರ್ತಿ ದ್ವಂಸ ಗೊಳಿಸಿ ಆಭರಣಗಳ ಕಳವು.
- ಗೋಪಾಲಗಂಜದ ಪ್ರಸ್ತುತ ಉಪಜಿಲ್ಹೆಯಲ್ಲಿನ ಮಹಿಳಾ ಅರ್ಚಕರ ಕತ್ತುಹಿಸಿಕಿ ಹತ್ಯೆ ಮತ್ತು ದೇವಿಯ ಬಂಗಾರದ ಆಭರಣಗಳ ಲೂಟಿ.
- ಸಿರಾಜಗಂಜದಲ್ಲಿನ ಶ್ರೀಕಾಳಿ ಮಾತಾ ದೇವಸ್ಥಾನದ ಮೇಲೆ ದಾಳಿ ನಡೆಸಿ ಒರ್ವ ಯುವಕನಿಂದ ಅನೇಕ ಮೂರ್ತಿಗಳ ವಿಡಂಬನೆ.
- ಬರಿಸಲಾದಲ್ಲಿ ರಾಧಾ ಗೋವಿಂದ ಸೇವಾಶ್ರಮ ದೇವಸ್ಥಾನದ ಮೇಲೆ ದಾಳಿ.
ಸಂಪಾದಕೀಯ ನಿಲುವುಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ ಹಸೀನಾ ಮತ್ತು ಭಾರತದ ನಡುವೆ ಒಳ್ಳೆಯ ಸಂಬಂಧವಿದೆ; ಆದರೆ ಅಲ್ಲಿಯ ಹಿಂದುಗಳಿಗೆ ಅದರ ಯಾವುದೇ ಲಾಭವಾಗದೆ ತದ್ವಿರುದ್ಧ ಹಿಂದೂಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಇದು ಭಾರತಕ್ಕೆ ನಾಚಿಕೆಗೇಡಾಗಿದೆ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed