|

ನವದೆಹಲಿ – ಗಿಡಮೂಲಿಕೆಗಳು ಮತ್ತು ಮಸಾಲೆಗಳಲ್ಲಿ ನಿಗದಿತ ಮಾನದಂಡಗಳಿಗಿಂತ 10 ಪಟ್ಟು ಹೆಚ್ಚು ಕೀಟನಾಶಕಗಳನ್ನು ‘ಭಾರತದ ಆಹಾರ ನಿಯಂತ್ರಕ’ ಅನುಮತಿಸಿದೆ ಎಂದು ಹಲವಾರು ಮಾಧ್ಯಮಗಳು ಹೇಳಿಕೊಂಡಿವೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಈ ಎಲ್ಲಾ ವರದಿಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದೆ. ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅಂತಹ ಎಲ್ಲಾ ವರದಿಗಳು ಆಧಾರರಹಿತ ಮತ್ತು ಸುಳ್ಳು ಎಂದು ಹೇಳಿದೆ.
ಪತ್ರಿಕಾ ಪ್ರಕಟಣೆಯಲ್ಲಿ,
1. ಭಾರತದ ‘ಗರಿಷ್ಠ ರೆಸಿಡ್ಯೂ ಲೆವೆಲ್’ ವಿಶ್ವದ ಅತ್ಯಂತ ಕಟ್ಟುನಿಟ್ಟಾದ ಮಾನದಂಡಗಳಲ್ಲಿ ಒಂದಾಗಿದೆ. ಕೀಟನಾಶಕಗಳಿಗೆ ಅಂತಹ ಮಟ್ಟವೂ ಇದೆ ಮತ್ತು ವಿಭಿನ್ನ ಆಹಾರ ಪದಾರ್ಥಗಳಿಗೆ ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತದೆ.
2. ಆದರೂ ಕೆಲವು ಕೀಟನಾಶಕಗಳ ಮಟ್ಟವನ್ನು 10 ಪಟ್ಟು ಹೆಚ್ಚಿಸಲಾಗಿದೆ ಎಂದು ನಾವು ಒಪ್ಪುತ್ತೇವೆ. ಈ ಕೀಟನಾಶಕಗಳನ್ನು ಕೇಂದ್ರ ಕೀಟನಾಶಕ ಮಂಡಳಿ ಮತ್ತು ಭಾರತೀಯ ನೋಂದಣಿ ಸಮಿತಿಯಲ್ಲಿ ನೋಂದಾಯಿಸಲಾಗಿಲ್ಲ. ಅವರಿಗೆ, ಮಿತಿಯನ್ನು 0.01 mg / kg ನಿಂದ 0.1 mg / kg ಗೆ 10 ಪಟ್ಟು ಹೆಚ್ಚಿಸಲಾಗಿದೆ. ಇದನ್ನು ವೈಜ್ಞಾನಿಕ ಗುಂಪುಗಳ ಶಿಫಾರಸಿನ ಮೇರೆಗೆ ಮಾಡಲಾಗಿದೆ.
3. 295 ಕ್ಕೂ ಹೆಚ್ಚು ಕೀಟನಾಶಕಗಳನ್ನು ಭಾರತದಲ್ಲಿ ಕೇಂದ್ರ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿಯಲ್ಲಿ ನೋಂದಾಯಿಸಲಾಗಿದೆ. ಇವುಗಳಲ್ಲಿ 139 ಕೀಟನಾಶಕಗಳನ್ನು ಮಸಾಲೆಗಳಲ್ಲಿ ಬಳಸಬಹುದು.
4. ಮೆಣಸಿನ ಪುಡಿಯಲ್ಲಿ ಸೇರಿಸಲಾಗುವ ‘ಮೈಕೋಬುಟಾನಿಲ್’ ಎಂಬ ಕೀಟನಾಶಕಕ್ಕೆ ‘CODEX’ ಈ ಮಾಪನವನ್ನು ಉಪಯೋಗಿಸುವ ಜಾಗತಿಕ ಸಂಸ್ಥೆಯು 20 mg/kg ಗರಿಷ್ಠ ಮಿತಿಯನ್ನು ನಿಗದಿಪಡಿಸಿದೆ, ನಾವು ಅದನ್ನು 2 mg/kg ವರೆಗೆ ಮಾತ್ರ ಮಿಶ್ರಣ ಮಾಡಲು ಅನುಮತಿಸುತ್ತೇವೆ.
5. ಇದಕ್ಕೆ ಇನ್ನೊಂದು ಉದಾಹರಣೆಯನ್ನು ನೀಡುತ್ತಾ, ಪ್ರಾಧಿಕಾರವು ‘ಸ್ಪಿರೋಮೆಸಿಫೆನ್’ ಮಾನದಂಡವನ್ನು ಮುಂದಿಟ್ಟಿದೆ. ಕೋಡೆಕ್ಸ್ 5 mg/kg ಮಿತಿಯನ್ನು ಹೊಂದಿದ್ದರೂ, ನಾವು ಐದು ಪಟ್ಟು ಕಡಿಮೆ ಅಂದರೆ 1 mg/kg ಮಾತ್ರ ಅನುಮತಿಸುತ್ತೇವೆ ಎಂದು ಹೇಳಿದೆ.
ಸಂಪಾದಕೀಯ ನಿಲುವುಭಾರತೀಯ ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಆರೋಪಿಸುವ ವಿದೇಶಿ ಸಂಸ್ಥೆಗಳು ಈಗ ವೈಜ್ಞಾನಿಕ ಪುರಾವೆಗಳನ್ನು ಕೇಳಬೇಕು, ಇಲ್ಲದಿದ್ದರೆ ಅವರು ಭಾರತದ ಕ್ಷಮೆಯಾಚಿಸಲು ಒತ್ತಾಯಿಸಬೇಕು ! |
ಭಾರತದ ಮೇಲೆ ದಾಳಿಯಾದರೆ ನಾವು ಭಾರತದೊಂದಿಗೆ ಇರುತ್ತೇವೆ! – ಟ್ರಂಪ್
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ