ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ನಿಜವಾದ ಸುಖ ಕೇವಲ ಸಾಧನೆಯಿಂದಲೇ ಸಿಗುತ್ತದೆ, ಭ್ರಷ್ಟ ಮಾರ್ಗದಿಂದ ದೊರೆತ ಹಣದಿಂದಲ್ಲ’.
‘ನಿಜವಾದ ಸುಖ ಕೇವಲ ಸಾಧನೆಯಿಂದಲೇ ಸಿಗುತ್ತದೆ, ಭ್ರಷ್ಟ ಮಾರ್ಗದಿಂದ ದೊರೆತ ಹಣದಿಂದಲ್ಲ’.
ರಾಜಕಾರಣಿ, ಬುದ್ಧಿಜೀವಿ ಅಥವಾ ವಿಜ್ಞಾನಿಗಳಿಂದಾಗಿ ವಿದೇಶಿಗರು ಭಾರತಕ್ಕೆ ಬರುವುದಿಲ್ಲ ಅವರು ಸಂತರಿಂದ ಹಾಗೆಯೇ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ, ಹಾಗಿದ್ದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮದ ಮೌಲ್ಯ ಇನ್ನೂ ತಿಳಿದಿಲ್ಲ.
ಪಾಶ್ಚಾತ್ಯ ದೇಶವು ಮಾಯೆಯಲ್ಲಿ ಮುಂದೆ ಹೋಗಲು ಕಲಿಸಿದರೆ ಭಾರತವು ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಹೇಗೆ ನಡೆಯುವುದು ಎಂಬುದನ್ನು ಕಲಿಸುತ್ತದೆ
ರಾಜಕೀಯ ಪಕ್ಷಗಳು ನಾವು ಅದನ್ನು ಕೊಡುತ್ತೇವೆ ಇದನ್ನು ಕೊಡುತ್ತೇವೆ, ಎಂದು ಹೇಳಿ ಜನತೆಯನ್ನು ಸ್ವಾರ್ಥಿಯನ್ನಾಗಿ ಮಾಡುತ್ತವೆ ಮತ್ತು ಸ್ವಾರ್ಥದಿಂದ ಜನರಲ್ಲಿ ಜಗಳಗಳಾಗುತ್ತವೆ. ತದ್ವಿರುದ್ಧ ಸಾಧನೆಯು ತ್ಯಾಗವನ್ನು ಮಾಡಲು ಕಲಿಸುತ್ತದೆ. ಇದರಿಂದ ಜನತೆಯಲ್ಲಿ ಜಗಳಗಳಾಗದೇ ಎಲ್ಲರೂ ಒಂದೇ ಕುಟುಂಬವೆಂದು ಆನಂದದಿಂದ ಇರುತ್ತಾರೆ.
ಸಾಧನೆಯಿಂದ ದೇವರು ಬೇಕೆಂದು ಅನಿಸಲಾರಂಭಿಸಿದರೆ ಪೃಥ್ವಿಯ ಮೇಲಿನ ಏನಾದರೂ ಬೇಕು ಎಂದು ಅನಿಸುವುದಿಲ್ಲ. ಇದರಿಂದ ಯಾರ ಬಗ್ಗೆಯೂ ಅಸೂಯೆ, ಮತ್ಸರ ಅಥವಾ ದ್ವೇಷವೆನಿಸುವುದಿಲ್ಲ, ಹಾಗೆಯೇ ಇತರರೊಂದಿಗೆ ವೈಮನಸ್ಸು, ಜಗಳ ಯಾವುದು ಆಗುವುದಿಲ್ಲ.
ಮುಂಬರುವ ಆಪತ್ಕಾಲದ ಬಗ್ಗೆ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಹೇಳುವುದು, ಪ್ರಸ್ತುತ ಬರವಣಿಗೆಯನ್ನು ಕಾರ್ಯಾಲಯದ ಸಹೋದ್ಯೋಗಿಗಳಿಗೆ ಓದಲು ಕೊಡುವುದು ಮುಂತಾದ ಹಂತಗಳಲ್ಲಿ ಜನಜಾಗೃತಿ ಮಾಡುವುದು ಆವಶ್ಯಕವಿದೆ. ಹೀಗೆ ಮಾಡುವುದು ಎಂದರೆ ಸಮಾಜ ಋಣವನ್ನು ತೀರಿಸುವುದಾಗಿದೆ. ಹೀಗೆ ಮಾಡುವವರಿಂದ ಸಾಧನೆಯೂ ಆಗಲಿದೆ.
ಹಿಂದೂಗಳೇ, ನಿದ್ರೆಯಲ್ಲಿರುವ ಹಿಂದೂಗಳಿಂದಲೇ ಇಡೀ ಜಗತ್ತಿನಲ್ಲಿ ಬಹುಸಂಖ್ಯೆಯಲ್ಲಿರುವ ಭಾರತದಲ್ಲಿಯೂ ಹಿಂದೂಗಳಿಗಾಗಿ ದುಃಖದಾಯಕ ವಾರ್ತೆಗಳು ಹೆಚ್ಚುತ್ತಿದೆ, ಅದರಿಂದ ನಿರಾಶರಾಗದೆ ಸಾಧನೆಯನ್ನು ಮಾಡುತ್ತಲೇ ಇರಿ. ೨೦೨೩ ರಲ್ಲಿ ಹಿಂದೂಗಳಿಗಾಗಿ ಕಾಲವು ಪೂರಕವಾಗಬಹುದು ಮತ್ತು ಅದು ೧೦೦೦ ವರ್ಷ ಪೂರಕವಾಗಿರುವುದು.
ಈಶ್ವರಪ್ರಾಪ್ತಿಗಾಗಿ ತನು-ಮನ-ಧನದ ತ್ಯಾಗ ಮಾಡುವುದಿರುತ್ತದೆ. ಅದುದರಿಂದ ಹಣ ಸಂಪಾದನೆ ಮಾಡುವುದರಲ್ಲಿ ಜೀವನವನ್ನು ಕಳೆಯುವುದಕ್ಕಿಂತ ಸತ್ಸೇವೆಯನ್ನು ಮಾಡಿ ಹಣದೊಂದಿಗೆ ತನು ಮತ್ತು ಮನದ ತ್ಯಾಗವನ್ನು ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೆ ಆಗುತ್ತದೆ.
ಮುಂಬರುವ ಆಪತ್ಕಾಲದಲ್ಲಿ ಉಪಯುಕ್ತವಾಗುವಂತಹ ಕೆಲವು ಕಲೆ ಅಥವಾ ಕೃತಿಗಳನ್ನು ಈಗಲೇ ಕಲಿತುಕೊಳ್ಳಬೇಕು ಹಾಗೂ ಆ ಕೃತಿಯನ್ನು ಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು ! : ಇದರಲ್ಲಿ ಹೊಲಿಗೆ ಯಂತ್ರದಲ್ಲಿ ಬಟ್ಟೆ ಹೊಲಿಯುವುದು, ಈಜುವುದು, ಎತ್ತಿನಗಾಡಿ ನಡೆಸುವುದು, ಕುದುರೆ ಸವಾರಿ ಇವುಗಳಂತಹ ಕೃತಿಗಳ ಸಮಾವೇಶವಿರಬೇಕು.
ದೇವರು ಎಲ್ಲೆಡೆ ಇದ್ದಾನೆ. ಎಂಬುದು ಹಿಂದೂ ಧರ್ಮದ ಬೋಧನೆಯಾಗಿರುವುದರಿಂದ ಹಿಂದೂಗಳಿಗೆ ಇತರ ಪಂಥಿಯರನ್ನು ದ್ವೇಷಿಸಲು ಕಲಿಸುವುದಿಲ್ಲ