ಉತ್ತರಪ್ರದೇಶದಲ್ಲಿ ಮುಂದುವರೆದ ಸಾಧುಗಳ ಹತ್ಯೆ !
ಬಿಜೆಪಿಯ ರಾಜ್ಯದಲ್ಲಿ ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಆಗ್ರಾ (ಉತ್ತರ ಪ್ರದೇಶ) – ಯಮುನಾ ನದಿಯ ದಡದಲ್ಲಿರುವ ಕಾಡಿನಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಸಾಧು ಶಿವ ಗಿರಿಯವರನ್ನು ಅಪರಿಚಿತ ಹಲ್ಲೆಕೋರರು ಕೊಡಲಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ದೇವಾಲಯದ ಆವರಣದಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಶಿವ ಗಿರಿಯವರ ನಿವಾಸ ಈ ದೇವಾಲಯದ ಪರಿಸರದಲ್ಲಿತ್ತು.
न्यू आगरा थाना क्षेत्र के मऊ गांव में एक साधू की हत्या की खबर मिली थी। शव को पोस्टमार्टम के लिए भेजा जा रहा है। मौके से कुल्हाड़ी भी बरामद हुई है जिससे हत्या की बात सामने आ रही है। मुकदमा दर्ज करके जांच की जाएगी। अभी कोई कारण सामने नहीं आया है: सिटी SP, आगरा, उत्तर प्रदेश pic.twitter.com/huxEW9o7hY
— ANI_HindiNews (@AHindinews) March 17, 2021
ಮಾರ್ಚ್ ೧೭ ರ ಬೆಳಗ್ಗೆ ಕೆಲವು ಸ್ಥಳೀಯರು ದೇವಾಲಯದ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಧುವಿನ ಶವವನ್ನು ನೋಡಿದರು. ಇದಾದ ನಂತರ ಸ್ಥಳೀಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ ತೆಗೆದುಕೊಂಡರು. ಈ ಸಾಧುವನ್ನು ಯಾರು ಮತ್ತು ಏಕೆ ಕೊಂದರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಬಳಸಿದ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆ ಅಥವಾ ಲೂಟಿ ಮಾಡುವ ಉದ್ದೇಶದಿಂದ ಈ ಕೊಲೆ ನಡೆದಿರುವುದಕ್ಕೆ ಯಾವುದೇ ಪುರಾವೆಗಳು ಪೊಲೀಸರಿಗೆ ದೊರೆತಿಲ್ಲ. ಆದ್ದರಿಂದ, ಪರಿಚಯಸ್ಥರಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.