ಎಲ್ಗರ್ ಪರಿಷತ್ತಿನಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿಯ ಹಿಂದೂ ದ್ವೇಷಿ ಫೂತ್ಕಾರ

ಪುಣೆ: ಇಂದಿನ ಹಿಂದೂ ಸಮಾಜವು ಸಂಪೂರ್ಣವಾಗಿ ಕೊಳೆತಿದೆ ಮತ್ತು ಭಾರತದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಭಾರತದಲ್ಲಿ ಮುಸ್ಲಿಮರನ್ನು ಕೊಲ್ಲಲು ಯಾವುದೇ ಕಾರಣ ಬೇಕಾಗಿಲ್ಲ. ಮುಸ್ಲಿಂ ಆಗಿದ್ದಾರೆಂಬ ಒಂದೇ ಕಾರಣ ಸಾಕು. ಉತ್ತರ ಪ್ರದೇಶ ಪೊಲೀಸರು ಒಂದೇ ವರ್ಷದಲ್ಲಿ ೧೯ ಜನರನ್ನು ಕೊಂದಿದ್ದಾರೆ. ಇದರಲ್ಲಿ ಹೆಚ್ಚಿನವರು ದಲಿತರು ಅಥವಾ ಮುಸಲ್ಮಾನರಾಗಿದ್ದರು. ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿ ಪುಣೆಯ ಗಣೇಶ್ ಕಲಾಕ್ರೀಡಾ ಮಂಚ್ ಇಲ್ಲಿ ನಡೆದ ಎಲ್ಗಾರ್ ಸಮ್ಮೇಳನದಲ್ಲಿ ಹೇಳಿದ್ದರಿಂದ ಸಮ್ಮೇಳನವು ಮತ್ತೊಮ್ಮೆ ವಿವಾದಗ್ರಸ್ತವಾಗಿದೆ.
ಉಸ್ಮಾನಿಯು ತನ್ನ ಹೇಳಿಕೆಯಲ್ಲಿ ಈ ಜನರು ‘ಲಿಂಚಿಂಗ್’ (ಜನಸಮೂಹದಿಂದ ಕೊಲ್ಲುವುದು) ಮಾಡುತ್ತಾರೆ; ಹತ್ಯೆ ಮಾಡುತ್ತಾರೆ. ಈ ಜನರು ಹತ್ಯೆಗೈದ ನಂತರ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ, ಆ ಸಮಯದಲ್ಲಿ ಅವರು ಏನು ಮಾಡುತ್ತಿರಬಹುದು? ಕೆಲವರು ಹೊಸ ರೀತಿಯಲ್ಲಿ ಕೈ ತೊಳೆಯಬಹುದು ಅಥವಾ ಕೆಲವು ಔಷಧಿಗಳನ್ನು ಮಿಶ್ರ ಮಾಡಿ ಸ್ನಾನ ಮಾಡುತ್ತಿರಬಹುದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ೧೬ ದಲಿತರು ಮತ್ತು ಮುಸ್ಲಿಮರನ್ನು “ಎನ್ ಕೌಂಟರ್ ಮಾಡಿದ್ದಾರೆ” ಎಂದು ಉಸ್ಮಾನಿಯ ದಾವೆಯಾಗಿದೆ. ಅವನ ಈ ಹೇಳಿಕೆಗಳು ಆಕ್ರೋಶವನ್ನು ಹುಟ್ಟುಹಾಕಿದೆ ಮತ್ತು ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿವೆ. (ಆರೋಪಿಗಳಿಗೆ ವಿವಾದಾತ್ಮಕ ಭಾಷಣ ಮಾಡಲು ಅವಕಾಶ ನೀಡಿದ್ದಕ್ಕಾಗಿ ಎಲ್ಗರ್ ಸಮ್ಮೇಳನದ ಸಂಘಟಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಅಪೇಕ್ಷೆಯಾಗಿದೆ. – ಸಂಪಾದಕರು)
ವಿಧಾನ ಪರಿಷತ್ತಿನ ವಿರೋಧ ಪಕ್ಷ ನೇತಾ ಪ್ರವೀಣ ದರೆಕರ ಇವರು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಾಗ, ಇದು ಅತ್ಯಂತ ವಿಕೃತ ಮಾನಸಿಕತೆಯಾಗಿದೆ ಎಂದಿದ್ದಾರೆ.
ಬಿಜೆಪಿಯ ವಕ್ತಾರ ಕೇಶವ ಉಪಾಧ್ಯೆ ಮತ್ತು ಶಾಸಕ ರಾಮ ಸಾತಪುತೆ ತಮ್ಮ ಟ್ವಿಟ್ಟರ್ ಖಾತೆಗಳಿಂದ ಶಾರ್ಜೀಲ್ ಉಸ್ಮಾನಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಎಲ್ಗರ್ ಪರಿಷತ್ನಲ್ಲಿ ಹಿಂದೂಗಳನ್ನು ‘ಕೊಳೆತಿದ್ದಾರೆ’ ಎಂದು ಜರೆದ ಶಾರ್ಜೀಲ್ ಉಸ್ಮಾನಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಮ ಸಾತಪುತೆಯವರು ಟ್ವೀಟ್ ಮಾಡಿದ್ದಾರೆ. ಸಂಘಟಕರು ಸಂವಿಧಾನದ ದಾಖಲೆಗಳನ್ನು ನೀಡಿ ಇಂತಹ ಹಿಂದೂ ವಿರೋಧಿ ವಕ್ತಾರರನ್ನು ಕರೆಯುತ್ತಾರೆ.
ಶಾರ್ಜೀಲ್ ಉಸ್ಮಾನಿಯವರ ಹೇಳಿಕೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ! – ಗೃಹ ಸಚಿವ ದೇಶಮುಖ

ಹಿಂದೂ ಸಮುದಾಯದ ಬಗ್ಗೆ ಶಾರ್ಜೀಲ್ ಉಸ್ಮಾನಿ ನೀಡಿದ ಹೇಳಿಕೆಯನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅನಿಲ ದೇಶಮುಖ ಇವರು ನಾಗ್ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!