ಉತ್ತರಪ್ರದೇಶದಲ್ಲಿ ಜಾತಿಯ ಸ್ಟಿಕ್ಕರ್‌ಗಳನ್ನು ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು

ಮಹಾರಾಷ್ಟ್ರದ ಶಿಕ್ಷಕರೊಬ್ಬರು ಕಳುಹಿಸಿದ ಪತ್ರದ ಮೇರೆಗೆ ಪ್ರಧಾನಿ ಕಚೇರಿಯಿಂದ ಸೂಚನೆ

  • ಶಿಕ್ಷಕರು ಪತ್ರವನ್ನು ಕಳುಹಿಸದೇ ಇದ್ದಲ್ಲಿ ಮತ್ತು ಪ್ರಧಾನ ಮಂತ್ರಿಗಳ ಕಚೇರಿ ಸೂಚನೆ ನೀಡದೇ ಇದ್ದಲ್ಲಿ, ಉತ್ತರಪ್ರದೇಶದಲ್ಲಿ ವಾಹನಗಳ ಮೇಲೆ ಜಾತಿಯ ಸ್ಟಿಕ್ಕರ್‌ಗಳು ಶಾಶ್ವತವಾಗಿ ಇರುತ್ತಿದ್ದವು. ಇದರಿಂದ ಆಡಳಿತ ಮತ್ತು ಪೊಲೀಸರು ಎಷ್ಟು ನಿಷ್ಕ್ರಿಯರಾಗಿದ್ದಾರೆ ಎಂಬುದು ತೋರುತ್ತದೆ ! ‘ಇನ್ನೂ ಎಷ್ಟು ರಾಜ್ಯಗಳಲ್ಲಿ ಈ ರೀತಿಯಲ್ಲಿ ಆಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸುತ್ತಾರೆಯೇ ?’ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ !

  • ಒಂದೆಡೆ ಎಲ್ಲಾ ರಾಜಕೀಯ ಪಕ್ಷಗಳು ಜಾತಿಬೇಧವನ್ನು ನಾಶ ಮಾಡುವಂತೆ ಹೇಳುತ್ತಾರೆ; ಮತ್ತೊಂದೆಡೆ ಅವರು ಜಾತಿ ರಾಜಕೀಯ ಆಟ ಆಡಿ ಇಂತಹ ಘಟನೆಗಳನ್ನು ನಿರ್ಲಕ್ಷಿಸುತ್ತಾರೆ !

ನವ ದೆಹಲಿ – ಉತ್ತರ ಪ್ರದೇಶದಲ್ಲಿ ವಾಹನ ಸಂಖ್ಯೆ ಫಲಕಗಳಲ್ಲಿ ಜಾತಿಯನ್ನು ಬರೆಯುವ ಪದ್ದತಿಯಿದೆ. ಇದರಲ್ಲಿ ಯಾದವ್, ಜಾಟ್, ಗುರ್ಜರ್, ಬ್ರಾಹ್ಮಣ, ಪಂಡಿತ್, ಕ್ಷತ್ರಿಯ, ಲೋಧಿ, ಮೌರ್ಯ ಮುಂತಾದ ವಿವಿಧ ಜಾತಿಗಳ ಹೆಸರಿನ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತಿದೆ. ಇದು ಜಾತಿಯ ಮಹತ್ವವನ್ನು ತೋರಿಸುವ ಪ್ರಯತ್ನವಾಗಿದೆ; ಆದರೆ ಈಗ ಉತ್ತರ ಪ್ರದೇಶದ ಸಾರಿಗೆ ಇಲಾಖೆಯು ಇಂತಹ ಜಾತಿಯ ಗುರುತನ್ನು ತೋರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಪ್ರಧಾನಿ ಕಚೇರಿಯಿಂದ ಸೂಚನೆ ಸಿಕ್ಕಿದ ನಂತರ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ. ಅಂತಹ ಸ್ಟಿಕ್ಕರ್‌ಗಳನ್ನು ಹೊಂದಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದ ಶಿಕ್ಷಕ ಹರ್ಷಲ ಪ್ರಭು ಅವರು ಪತ್ರವನ್ನು ಕಳುಹಿಸಿದ ನಂತರ, ಪ್ರಧಾನಿ ಕಚೇರಿ ಈ ವಿಷಯದ ಬಗ್ಗೆ ಗಮನ ಹರಿಸಿತು. ಅಂತಹ ಸ್ಟಿಕ್ಕರ್‌ಗಳು ನಮ್ಮ ಸಾಮಾಜಿಕ ಸಾಮರಸ್ಯಕ್ಕೆ ಒಂದು ರೀತಿಯ ಅಪಾಯ ನಿರ್ಮಾಣ ಮಾಡುತ್ತವೆ ಎಂದು ಹರ್ಷಲ ಪ್ರಭು ಹೇಳಿದ್ದಾರೆ.