ಜಯಸಿಂಗಪುರ (ಮಹಾರಾಷ್ಟ್ರ) – ಡಿಸೆಂಬರ ೨೧ ರಂದು ರಾಹುಲ ಕಾಂಬಳೆ, ರಾಹುಲ ಪವಾರ, ಫಕೀರಚಂದ ಪಾಥರವಟ ಹಾಗೂ ಅವರ ೧೫ ಸಹಚರರು ಕೊಳಗೇರಿ ಪ್ರದೇಶದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಮಯದಲ್ಲಿ ಅವರು ಖಡ್ಗದಿಂದ ಕೇಕ್ ಕತ್ತರಿಸಿದರು ಹಾಗೂ ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿ ಜನರಲ್ಲಿ ಅವರ ಬಗೆಗಿನ ದಿಗಿಲು ನಿರ್ಮಾಣ ಮಾಡಲು ಪ್ರಯತ್ನಿಸಿದರು. ಈ ಅಂಶ ಗಮನದಲ್ಲಿಟ್ಟುಕೊಂಡು ಪೊಲೀಸರು ಈ ಮೂವರ ವಿರುದ್ಧ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ, ಸಮಾಜದಲ್ಲಿ ಭಯ ನಿರ್ಮಾಣ ಮಾಡುವ, ಖಡ್ಗದಿಂದ ಕೇಕನ್ನು ಕತ್ತರಿಸಿ ಹುಟ್ಟುಹಬ್ಬವಬ್ಬು ಆಚರಿಸಿ ಸಾಮಾನ್ಯ ಜನರ ಮೇಲೆ ಗೂಂಡಾಗಿರಿಯನ್ನು ಮಾಡಿ ಅವರಿಂದ ಹಣ ಲಪಟಾಯಿಸಿ ಕೊಳ್ಳುವ ಮುಂತಾದ ಅಪರಾಧದಗಳನ್ನು ನೊಂದಾಯಿಸಿ ಅವರನ್ನು ಬಂಧಿಸಿದ್ದಾರೆ. ಪೊಲೀಸ್ ಉಪನಿರೀಕ್ಷಕ ಪ್ರಮೋದ ವಾಘ ಇವರು ಇದರ ಬಗ್ಗೆ ಇನ್ನು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. (ಇತ್ತೀಚಿನ ಕಾಲದಲ್ಲಿ ಖಡ್ಗದಿಂದ ಕೇಕನ್ನು ಕತ್ತರಿಸುವಂತಹ ಬೀಭತ್ಸ ಮಾನಸಿಕತೆ ಯುವಕರಲ್ಲಿ ಹರಡುತ್ತಿವೆ. ಧರ್ಮಶಿಕ್ಷಣ ಇಲ್ಲದಿರುವುದರಿಂದ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸುವುದು, ಕಾನೂನಿನ ಭಯವಿಲ್ಲದಿರುವುದರಿಂದ ಖಡ್ಗದಿಂದ ಕೇಕ್ ಕತ್ತರಿಸುವ ಹಾಗೂ ಅದರ ಚಿತ್ರದ ಪ್ರಸಾರ ಮಾಡುವಂತಹ ಕೃತಿ ಮಾಡುವಲ್ಲಿ ಯುವಕರು ಹಿಂಜರಿಯುತ್ತಿಲ್ಲ ! – ಸಂಪಾದಕರು)
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಖಡ್ಗದಿಂದ ಕೇಕ್ ಕತ್ತಿರಿಸಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಮೂವರ ಬಂಧನ
ಖಡ್ಗದಿಂದ ಕೇಕ್ ಕತ್ತಿರಿಸಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಮೂವರ ಬಂಧನ
ಸಂಬಂಧಿತ ಲೇಖನಗಳು
- BrahMos Missile : ಬ್ರಹ್ಮೋಸ್ ಕ್ಷಿಪಣಿಯ ಮೊದಲ ಸೆಟ್(ಕಂತು) ಅನ್ನು ಫಿಲಿಪೈನ್ಸ್ಗೆ ಕಳುಹಿಸಿದ ಭಾರತ !
- ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ಹೊಸ ಮುಖ್ಯಸ್ಥ
- ಸಂಪೂರ್ಣ ಸ್ವದೇಶಿ ನಿರ್ಮಿತ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ
- Loksabha Elections 2024 : ಬಂಗಾಳದಲ್ಲಿ ಮೊದಲ ಹಂತದ ಮತದಾನದಂದು ಹಿಂಸಾಚಾರ !
- Bhojshala Survey 40% Completed: ಧಾರ್ನಲ್ಲಿ (ಮಧ್ಯಪ್ರದೇಶ) ಭೋಜಶಾಲಾದ ಶೇ. 40 ರಷ್ಟು ಸಮೀಕ್ಷೆ ಪೂರ್ಣ
- Cow Smuggling in Solapur: ಶ್ರೀರಾಮ ನವಮಿಯಂದು ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ 7 ಗೋವುಗಳ ಪ್ರಾಣ ಉಳಿಸಿದರು !