|
|
ನವ ದೆಹಲಿ – ರೋಹಿಂಗ್ಯಾ ಮುಸ್ಲಿಮರೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಸಂಘಟನೆ ಭಾರತದಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳಿಗೆ ತಿಳಿದುಬಂದಿದೆ. ಮಹಿಳೆಯ ನೇತೃತ್ವದಲ್ಲಿ, ಭಯೋತ್ಪಾದಕ ಸಂಘಟನೆಯು ಮುಂದಿನ ಕೆಲವು ವಾರಗಳಲ್ಲಿ ಭಾರತೀಯ ನಗರಗಳಲ್ಲಿ ದಾಳಿ ನಡೆಸಬಹುದು. ಈ ಸಂಘಟನೆಯ ಭಯೋತ್ಪಾದಕರಿಗೆ ಮ್ಯಾನ್ಮಾರ್ನಲ್ಲಿ ತರಬೇತಿ ನೀಡಲಾಗಿದೆ. ಡಿಸೆಂಬರ್ ಮಧ್ಯದಲ್ಲಿ ಅಥವಾ ಡಿಸೆಂಬರ್ ಅಂತ್ಯದಲ್ಲಿ ಉಗ್ರರ ಸಮೂಹ ಬಾಂಗ್ಲಾದೇಶದ ಮೂಲಕ ಭಾರತವನ್ನು ಪ್ರವೇಶಿಸಬಹುದು, ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಸಂಘಟನೆ ಮಲೇಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ನಂಟಿರುವ ಕೆಲವು ಜಿಹಾದಿಗಳು ಭಯೋತ್ಪಾದಕರ ಸಮೂಹಕ್ಕೆ ಸಹಾಯ ಮಾಡುತ್ತಿರಬಹುದು, ಎಂದು ಗುಪ್ತಚರ ಸಂಸ್ಥೆಗಳಿಗೆ ಅನುಮಾನವಿದೆ. ದೆಹಲಿ, ಹರಿಯಾಣಾ, ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಲ ಈ ರಾಜ್ಯಗಳ ಪೊಲೀಸರಿಗೆ ಹಾಗೂ ಗುಪ್ತಚರ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಯೋಧ್ಯೆ, ಬೋಧಗಯಾ, ಪಂಜಾಬ್ ಮತ್ತು ಶ್ರೀನಗರ ನಗರಗಳಲ್ಲಿ ದಾಳಿಯ ಅಪಾಯ ಹೆಚ್ಚು ಎಂದು ಅವರು ಹೇಳಿದರು.
India busts Malaysia-based outfit’s terror attack plot https://t.co/lJWCUG7IXo pic.twitter.com/HSeJrTxfkA
— The Times Of India (@timesofindia) December 12, 2020
೧. ಗುಪ್ತಚರ ಮೂಲಗಳ ಪ್ರಕಾರ, ಈ ದಾಳಿಗೆ ೨ ಲಕ್ಷ ಡಾಲರ್ (ಸುಮಾರು ೧ ಕೋಟಿ ೪೭ ಲಕ್ಷ ೪೭ ಸಾವಿರ ರೂಪಾಯಿ) ವಿನಿಮಯವಾಗಿದೆ. ಈ ವ್ಯವಹಾರವು ಭಾರತಕ್ಕೆ ಸಂಬಂಧಿಸಿದೆ. ಅಲ್ಲದೆ, ಇದರ ಎಳೆಯನ್ನು ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಹಾಗೂ ಮಲೇಷ್ಯಾದಲ್ಲಿ ಅಡಗಿರುವ ಡಾ. ಜಾಕಿರ್ ನಾಯಕ್ ಮತ್ತು ದೇಶದ ರಾಜಧಾನಿ ಕೌಲಾಲಂಪುರದಲ್ಲಿರುವ ರೋಹಿಂಗ್ಯಾ ನಾಯಕ ಮೊಹಮ್ಮದ್ ನಾಸಿರ್ನೊಂದಿಗಿದೆ.
೨. ಈ ಆಕ್ರಮಣದ ಯೋಜನೆಯಲ್ಲಿ ಮಹಿಳೆ ಯಾರು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಈ ಮಹಿಳೆಯನ್ನು ಇದೇ ವರ್ಷ ಮಲೇಷ್ಯಾದಿಂದ ಮ್ಯಾನ್ಮಾರ್ಗೆ ತರಬೇತಿಗಾಗಿ ಕಳುಹಿಸಲಾಗಿತ್ತು.

ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!