ಬೆಂಗಳೂರು – ‘ಸನಾತನ ಪಂಚಾಂಗ’ ಆಪ್ ಇದು ಅತ್ಯತ್ತಮ ಆಪ್ ಆಗಿದೆ, ಎಂದು ಖ್ಯಾತ ಚಿತ್ರನಟ ಜಗ್ಗೇಶ್ರವರು ಅಭಿಪ್ರಾಯ ವ್ಯಕ್ತಪಡಿಸಿದರು, ‘ಸನಾತನ ಪಂಚಾಂಗ ೨೦೨೧’ ಈ ಆಪ್ ಅನ್ನು ಧರ್ಮಪ್ರೇಮಿಗಳು ಟ್ವಿಟರ್ನ ಮಾಧ್ಯಮದಿಂದ ಪ್ರಸಾರ ಮಾಡಿದ್ದರು. ಇದಕ್ಕೆ ಅವರು ಈ ಟ್ವೀಟ್ ಮಾಡಿದ್ದಾರೆ.
ನಮ್ಮ ಸಂಸ್ಕೃತಿ ದೇವರು ಗುರುಹಿರಿಯರು ಸನಾತಪದ್ಧತಿ
ದಿನ ನಕ್ಷತ್ರ ಹಬ್ಬ ಹರಿದಿನ ಬಗ್ಗೆ ಉತ್ತಮ ಮಾರ್ಗದರ್ಶನದ ಮಾಹಿತಿ ಪಡೆಯಬಹುದು!
ಪಾಶ್ಚಾತ್ಯ ಮಾರ್ಗಕ್ಕೆ ಮರುಳಾಗಿ ನಮ್ಮತನ ಸನ್ನಡತೆ ಮರೆತವರಿಗೆ ಹೆಮ್ಮೆಯಿಂದ ನಮ್ಮತನದ ಅರಿವುಬರುತ್ತದೆ!ಇದಕ್ಕೆ ನಮ್ಮದು ಎಂಬ ಶುದ್ಧಮನಸ್ಸು ಬೇಕು ಅಷ್ಟೆ! https://t.co/gG8kfUO3CJ— ನವರಸನಾಯಕ ಜಗ್ಗೇಶ್ (@Jaggesh2) December 8, 2020
ನನ್ನ ಮೊಬೈಲ್ ನಲ್ಲಿ ಸನಾತನ ಪಂಚಾಂಗ 5ವರ್ಷದಿಂದ… pic.twitter.com/W4eyCTGEam
— ನವರಸನಾಯಕ ಜಗ್ಗೇಶ್ (@Jaggesh2) December 7, 2020
೧. ನಟ ಜಗ್ಗೇಶ ಅವರು ತಮ್ಮ ಟ್ವೀಟ್ನಲ್ಲಿ, “ನಮ್ಮ ಸಂಸ್ಕೃತಿ, ದೇವತೆ, ಗುರು, ಆಚಾರ್ಯ, ಸನಾತನ ಧರ್ಮ, ನಕ್ಷತ್ರ, ಹಬ್ಬ-ಹರಿದಿನ ಇವುಗಳ ಬಗ್ಗೆ ಉತ್ತಮ ಮಾಹಿತಿ ಈ ಆಪ್ನಲ್ಲಿ ಸಿಗುತ್ತದೆ, ಇದರ ಉಪಯೋಗದಿಂದ ಪಾಶ್ಚಾತ್ಯರ ಅಂಧಾನುಕರಣೆಯಿಂದ ನಮ್ಮ ಶುದ್ಧ ಆಚರಣೆಯನ್ನು ಮರೆತವರಿಗೆ ಹೆಮ್ಮೆಯಿಂದ ನಮ್ಮತನದ ಅರಿವು ಬರುತ್ತದೆ”, ಎಂದಿದ್ದಾರೆ.
೨. ವೈಶಿಷ್ಟ್ಯವೆಂದರೆ ಜಗ್ಗೇಶ್ರವರು ತಾವು ಸ್ವತಃ ಈ ಆಪ್ ಅನ್ನು ೫ ವರ್ಷಗಳಿಂದ ಉಪಯೋಗಿಸುತ್ತಿರುವುದಾಗಿ ತಿಳಿಸುತ್ತಾ ಇನ್ನೊಂದು ಟ್ವೀಟ್ ಮಾಡಿ ಅವರು ತಮ್ಮ ಸಂಚಾರವಾಣಿಯಲ್ಲಿರುವ ‘ಸನಾತನ ಪಂಚಾಂಗ ಆಪ್’ನ ಸ್ಕ್ರೀನ್ಅನ್ನು ಶೇರ್ ಮಾಡಿದ್ದಾರೆ. ಅವರ ಈ ವಿಶೇಷ ಟ್ವೀಟ್ಗೆ, ೧,೨೦೦ ಲೈಕ್ಗಳು ಸಿಕ್ಕಿವೆ ಮತ್ತು ಕೆಲವು ಧರ್ಮಪ್ರೇಮಿಗಳು ತಾವೂ ಈ ಆಪ್ನ ಡೌನಲೋಡ್ ಮಾಡುವುದಾಗಿ ವ್ಯಕ್ತಪಡಿಸಿದರೆ ಕೆಲವರು ಈ ಪಂಚಾಂಗದ ಮುದ್ರಿತ ಪ್ರತಿಯ ಬೇಡಿಕೆಯನ್ನೂ ಸಹ ಮಾಡಿದ್ದಾರೆ.
ಈ ಟ್ವೀಟ್ ಗೆ ೬೦ ರಿಟ್ವೀಟ್ಗಳು, ೧೦೫ ಲೈಕ್ಗಳು, ಹಾಗೆಯೇ ೫ ಜನರು ತಾವೂ ಈ ಆಪ್ನ ಬಳಕೆ ಮಾಡುತ್ತಿರುವುದಾಗಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
‘ಸನಾತನ ಪಂಚಾಂಗ 2021’ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ : https://sanatanpanchang.com/download-apps/

ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!