ನವ ದೆಹಲಿ – ೧೯೮೧ ರ ಡಿಸೆಂಬರ್ ೧೧ ರಂದು ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ೧೬ ವರ್ಷದ ಸತ್ಯ ದೇವ ಎಂಬ ಬಾಲಕನು ಓರ್ವ ವ್ಯಕ್ತಿಯ ಹತ್ಯೆ ಮಾಡಿದ್ದನು. ಈ ಪ್ರಕರಣದಲ್ಲಿ ಆತನಿಗೆ ಬಹ್ರೇನಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಶಿಕ್ಷೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ. ೧೯೮೬ ರ ‘ಜ್ಯುವೆನಾಯಿಲ್ ಸ್ಟೀಸ್ ಕಾಯ್ದೆ’ ಅಡಿಯಲ್ಲಿ ೧೬ ವರ್ಷಕ್ಕಿಂತ ಮೇಲ್ಪಟ್ಟವರನ್ನು ಅಪ್ರಾಪ್ತ ವಯಸ್ಕರಂತೆ ಪರಿಗಣಿಸುತ್ತಿರಲಿಲ್ಲ’, ಎಂದು ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತ್ತು. ನಂತರ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ‘ಈಗ ೫೫ ರ ಹರೆಯದ ಸತ್ಯದೇವ ಅವರ ಶಿಕ್ಷೆಯನ್ನು ‘ಜ್ಯುವೆನಾಯಿಲ್ ಬೋರ್ಡ್’ ನಿರ್ಧರಿಸಬೇಕು’ ಎಂದು ಹೇಳಿ ಈ ಪ್ರಕರಣವನ್ನು ‘ಜ್ಯುವೆನಾಯಿಲ್ ಬೋರ್ಡ್’ಗೆ ವರ್ಗಾಯಿಸಿದೆ. ‘ಈ ವ್ಯಕ್ತಿಯು ೧೯೮೧ ರಲ್ಲಿ ಹತ್ಯೆ ಮಾಡಿದ್ದನು. ಘಟನೆಯ ಸಮಯದಲ್ಲಿ ಅಪರಾದಿಯು ಅಪ್ರಾಪ್ತ ವಯಸ್ಕವನಾಗಿದ್ದನು. ಅದಕ್ಕಾಗಿಯೇ ಅವರಿಗೆ ಶಿಕ್ಷೆಯನ್ನು ಸಹ ‘ಜ್ಯುವೆನಾಯಿಲ್ ಬೋರ್ಡ್’ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ಪ್ರಕರಣದ ವಿಚಾರಣೆಯು ೨೦೧೮ ರಲ್ಲಿ ಪ್ರಾರಂಭವಾಗಿತ್ತು. ಆ ಸಮಯದಲ್ಲಿ ‘ಜುವೆನೈಲ್ ಜಸ್ಟೀಸ್ ಆಕ್ಟ್ ೨೦೦೦’ ಆ ಸಮಯದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ತಿದ್ದುಪಡಿ ಮಾಡಿದ ಕಾನೂನು ಅಪ್ರಾಪ್ತ ವಯಸ್ಸನ್ನು ೧೮ ಎಂದು ನಿಗದಿಪಡಿಸಿತ್ತು. ಈ ಕಾನೂನಿನ ಪ್ರಕಾರ, ಅಪರಾಧದ ಸಮಯದಲ್ಲಿ ಆರೋಪಿಯ ವಯಸ್ಸು ೧೮ ವರ್ಷಕ್ಕಿಂತ ಕಡಿಮೆ ಇದ್ದರೆ, ಆತನ ವಿರುದ್ಧದ ಪ್ರಕರಣವನ್ನು ಜುವೆನೈಲ್ ಜಸ್ಟೀಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ವಾಯುಪಡೆಯ ಅಧಿಕಾರಿಯ ಪತ್ನಿಯ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ 5 ದಿನಗಳ ಪೊಲೀಸ್ ಕಸ್ಟಡಿ!
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
ಪಂಜಾಬ್ ಸಿಎಂ ಭಗವಂತ್ ಮಾನ್ ‘ಗುರು ದ್ರೋಹಿ’ ಎಂದು ಘೋಷಿಸಿದ ಅಕಾಲ ತಖ್ತ್
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ