- ಹಿಂದೂಗಳಿಗೆ ಸರ್ವಧರ್ಮಸಮಾಭಾವದ ಬುದ್ಧಿ ಹೇಳುವ ಜಾತ್ಯತೀತವಾದಿಗಳು ಹಾಗೂ ಪ್ರಗತಿ(ಅಧೋಗತಿ) ಪರರು ಯಾವ ಬಿಲದಲ್ಲಿ ಅಡಗಿದ್ದಾರೆ ? ಮಹಿಳಾ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಆಯೋಗಗಳು ಈಗ ಎಲ್ಲಿವೆ ?
- ‘ಲವ್ ಜಿಹಾದ್’ ಮತ್ತು ಮತಾಂತರವನ್ನು ವಿರೋಧಿಸುವಾಗ ಮಾತನಾಡುವವರು ಈಗ ಏಕೆ ಮೌನವಾಗಿದ್ದಾರೆ ?
- ಯಾರೂ ಈ ರೀತಿಯ ದೇವತೆಗಳನ್ನು ಮಾನವೀಕರಣಗೊಳಿಸುವುದು ಅಪೇಕ್ಷಿತವಿಲ್ಲ !
ಕೋಲಕಾತಾ (ಬಂಗಾಲ) – ಬಂಗಾಲದ ತೃಣಮೂಲ ಕಾಂಗ್ರೆಸ್ನ ಸಂಸದೆ ಹಾಗೂ ನಟಿ ನುಸರತ್ ಜಹಾನ್ ಅವರು ಮಹಾಲಯದ ದಿನದಂದು ತಮ್ಮ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಶ್ರೀ ದುರ್ಗಾದೇವಿಯಂತೆ ವೇಷವನ್ನು ತೊಟ್ಟಿದ್ದರು, ಅದೇರೀತಿ ಅವರು ಸೆಪ್ಟೆಂಬರ್ ೨೦ ರಂದು ಶ್ರೀ ದುರ್ಗಾಪೂಜೆ ಮಾಡುವ ಒಂದು ವೀಡಿಯೊವನ್ನು ಸಹ ಪ್ರಸಾರ ಮಾಡಿದ್ದರು. ಈ ಬಗ್ಗೆ ಮತಾಂಧರು ನುಸರತ್ಗೆ ಜೀವಬೆದರಿಕೆ ಹಾಕಿದ್ದಾರೆ. ನುಸರತ್ ಜಹಾನ್ ಇವರು ಹಿಂದೂ ಯುವಕನೊಂದಿಗೆ ಮದುವೆಯಾಗಿದ್ದಾರೆ.
“Your time of death has come”, radical Islamists attack actress-politician Nusrat Jahan on social media after she poses as Goddess Durgahttps://t.co/6HuihrqWPm
— OpIndia.com (@OpIndia_com) September 27, 2020
೧. ಇನ್ಸ್ಟಾಗ್ರಾಮ್ನಲ್ಲಿ ‘ಎಂ.ಕೆ.ಖಾನ್ ೪೮೬’ ಹೆಸರಿನ ವ್ಯಕ್ತಿ ಬೆದರಿಕೆಯೊಡ್ಡುತ್ತಾ, ನಿಮ್ಮ ಸಾವು ಸಮೀಪಿಸಿದೆ. ಅಲ್ಲಾಹನಿಗೆ ಹೆದರಿ. ನೀವು ನಿಮ್ಮ ದೇಹವನ್ನೂ ಮುಚ್ಚಿಕೊಳ್ಳಲು ಸಾಧ್ಯವಿಲ್ಲವೇ ? ಎಂದು ಹೇಳಿದ್ದಾರೆ.
೨. ಇನ್ಸ್ಟಾಗ್ರಾಮ್ನಲ್ಲಿ, ಸಾಗರ್ ಹುಸೇನ್ ಎಂಬ ವ್ಯಕ್ತಿಯು, ನೀವು ಮುಸಲ್ಮಾನರಾಗಿದ್ದು ಹಿಂದೂಗಳನ್ನು ಏಕೆ ಬೆಂಬಲಿಸುತ್ತೀರಿ ? ಎಂದು ಪ್ರಶ್ನಿಸಿದ್ದಾನೆ.
೩. ನುಸರತ್ ಜಹಾನ್ ಅವರ ಕೈಯಲ್ಲಿರುವ ತ್ರಿಶೂಲವನ್ನು ಉಲ್ಲೇಖಿಸಿದ ಮೊಹಮ್ಮದ್ ಅನ್ವರ್, ನೀವು ಮುಸಲ್ಮಾನರಾಗಿದ್ದರೆ, ಅದು ನಿಮ್ಮ ಕೈಯಲ್ಲಿ ಹೇಗೆ ಇರುತ್ತದೆ ? ಅಲ್ಲಾಹನಿಗೆ ಶರಣಾಗಿ. ಹಿಂದೂಗಳ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿ ಎಂದು ಬರೆದಿದ್ದಾನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು