ದೇಶಿ ಆಕಳು ಮತ್ತು ಎತ್ತುಗಳನ್ನು ಅರ್ಪಣೆ ಮಾಡಲು ಬಯಸುವ ಮತ್ತು ಅವುಗಳನ್ನು ಸ್ವಲ್ಪ ಸಮಯ ಪಾಲನೆ ಮಾಡಲಿಚ್ಛಿಸುವವರು ಸಂಪರ್ಕಿಸಿ !
ಮುಂಬರುವ ಆಪತ್ಕಾಲದಲ್ಲಿ ಸನಾತನ ಆಶ್ರಮದಲ್ಲಿಯ ನಿತ್ಯ ಆವಶ್ಯಕತೆಗಳನ್ನು ಪೂರೈಸಲು ದೇಶಿ ಆಕಳು ಮತ್ತು ಎತ್ತುಗಳ ಆವಶ್ಯಕತೆ ಭಾಸವಾಗಬಹುದು. ಆ ದೃಷ್ಟಿಯಿಂದ ಕೆಲವು ಹಿತಚಿಂತಕರು ದೇಶಿ ಆಕಳು ಮತ್ತು ಎತ್ತುಗಳನ್ನು ಅರ್ಪಣೆ ಮಾಡಲು ಇಚ್ಛಿಸುತ್ತಿದ್ದಾರೆ. ಹಾಗೆಯೇ ಕೆಲವು ರೈತ ಸಾಧಕರು ಮತ್ತು ಹಿತಚಿಂತಕರು ಅರ್ಪಣೆಯಲ್ಲಿ ದೊರಕಿದ ಆಕಳು ಮತ್ತು ಎತ್ತುಗಳನ್ನು ಸ್ವಲ್ಪ ಸಮಯದವರೆಗೆ ಪಾಲನೆ ಮಾಡುವ ಸಿದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿ ಆಕಳು ಮತ್ತು ಎತ್ತುಗಳನ್ನು ಅರ್ಪಣೆ ಕೊಡಲು ಅಥವಾ ಸ್ವಲ್ಪ ಸಮಯದವರೆಗೆ ಪಾಲನೆ ಮಾಡುವ ಸೇವೆಯನ್ನು ಮಾಡಲಿಚ್ಛಿಸುವವರು ಸಂಪರ್ಕಿಸಬೇಕು.
ಆಕಳು ಸಂಪೂರ್ಣವಾಗಿ ದೇಶಿ ಮತ್ತು ಹಾಲು ನೀಡುವಂತಹದ್ದಾಗಿರಬೇಕು. ಹಾಗೆಯೇ ಎತ್ತುಗಳಿಗೆ ಸಹ ಕೃಷಿ ಕೆಲಸ ಮತ್ತು ಎತ್ತಿನಗಾಡಿಯನ್ನು ಎಳೆಯುವ ಅಭ್ಯಾಸ ಇರಬೇಕು. ಆಕಳು ಮತ್ತು ಎತ್ತುಗಳನ್ನು ಅರ್ಪಣೆ ಕೊಡಬಯಸುವ ದಾನಿಗಳು ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ ಆಕಳು ಮತ್ತು ಎತ್ತುಗಳ ಜಾತಿ, ವಯಸ್ಸು ಇತ್ಯಾದಿಗಳ ಮಾಹಿತಿಯನ್ನು ವಿವರವಾಗಿ ತಿಳಿಸಬೇಕು.
ಆಕಳು ಮತ್ತು ಎತ್ತುಗಳನ್ನು ಸ್ವಲ್ಪ ಸಮಯದವರೆಗೆ ಪಾಲನೆ ಮಾಡಲು ಸಿದ್ಧವಿರುವವರು ಈ ಸೇವೆಯಲ್ಲಿ ತಮ್ಮ ಅನುಭವ, ಎಷ್ಟು ಸಮಯದವರೆಗೆ ಪಾಲನೆ ಮಾಡುವ ಸಿದ್ಧತೆ ಇದೆ, ಮುಂತಾದ ವಿವರಗಳನ್ನು ಕೆಳಗಿನ ಸಂಖ್ಯೆಗೆ ತಿಳಿಸಬೇಕು.
ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ 7058885610 (ಬೆಳಗ್ಗೆ ೧೦ ರಿಂದ ಸಾಯಂಕಾಲ ೭ ಈ ಅವಧಿಯಲ್ಲಿ ಸಂಪರ್ಕ ಮಾಡಬೇಕು.)
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401
ವಿ-ಅಂಚೆ : [email protected]
– ಶ್ರೀ. ವೀರೆಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೧೦.೧.೨೦೨೧)
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !