
ಪ್ರಸ್ತುತ ಚಾತುರ್ಮಾಸ ನಡೆಯುತ್ತಿದೆ, ಚಾತುರ್ಮಾಸದ ಮಹತ್ವ, ವೈಶಿಷ್ಟ್ಯಗಳೇನು ? ಈ ಅವಧಿಯಲ್ಲಿ ಯಾವೆಲ್ಲ ವ್ರತಗಳನ್ನು ಮಾಡಬೇಕು ? ಮುಂತಾದ ಮಾಹಿತಿಗಳನ್ನು ವಾಚಕರಿಗಾಗಿ ನೀಡುತ್ತಿದ್ದೇವೆ.
ಅನಂತ ಚತುರ್ದಶಿ
(೧.೯.೨೦೨೦)
ತಿಥಿ : ಭಾದ್ರಪದ ಶುಕ್ಲ ಚತುರ್ದಶಿ
ಉದ್ದೇಶ : ಈ ವ್ರತವನ್ನು ಮುಖ್ಯವಾಗಿ ಗತವೈಭವದ ಪುನರ್ಪ್ರಾಪ್ತಿಗಾಗಿ ಮಾಡುತ್ತಾರೆ.
ವ್ರತವನ್ನು ಆಚರಿಸುವ ಪದ್ಧತಿ : ಈ ವ್ರತದ ಮುಖ್ಯ ದೇವತೆ ಅನಂತ, ಅಂದರೆ ಶ್ರೀವಿಷ್ಣು ಆಗಿದ್ದು ಶೇಷ ಮತ್ತು ಯಮುನೆಯು ಉಪದೇವತೆಗಳಾಗಿದ್ದಾರೆ. ಈ ವ್ರತದ ಕಾಲಾವಧಿಯು ಹದಿನಾಲ್ಕು ವರ್ಷಗಳದ್ದಾಗಿದೆ. ಈ ವ್ರತವನ್ನು ಯಾರಾದರೂ ಹೇಳಿದರೆ ಅಥವಾ ಅಕಸ್ಮಾತ್ತಾಗಿ ಅನಂತನದಾರವು ಸಿಕ್ಕಿದಾಗ ಪ್ರಾರಂಭಿಸುತ್ತಾರೆ. ಅನಂತರ ಅದು ಆ ಕುಲದಲ್ಲಿ ಹಾಗೆ ಮುಂದುವರಿಯುತ್ತದೆ. ಅನಂತನ ಪೂಜೆಯಲ್ಲಿ ಹದಿನಾಲ್ಕು ಗಂಟುಗಳನ್ನು ಹಾಕಿದ ಕೆಂಪುರೇಶ್ಮೆಯ ದಾರವನ್ನು ಪೂಜಿಸುತ್ತಾರೆ. ಪೂಜೆಯ ನಂತರ ದಾರವನ್ನು ಯಜಮಾನನ ಬಲಗೈಗೆ ಕಟ್ಟುತ್ತಾರೆ. ಚತುರ್ದಶಿಯು ಹುಣ್ಣಿಮೆಯುಕ್ತವಾಗಿದ್ದರೆ ಈ ವ್ರತದಿಂದ ವಿಶೇಷ ಲಾಭವಾಗುತ್ತದೆ. (ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !