ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ನಾಗರಿಕರಿಗಾಗಿ ಮಹತ್ವದ ಮಾಹಿತಿ
ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಎಷ್ಟೇ ಪೂರ್ವ ಸಿದ್ಧತೆಗಳನ್ನು ಮಾಡಿದರೂ, ನಮ್ಮ ರಕ್ಷಣೆಯಾಗಲು ಪ್ರತಿನಿತ್ಯ ಭಗವಂತನ ಆರಾಧನೆ (ಸಾಧನೆ)ಯನ್ನು ಮಾಡಬೇಕು. ಸರ್ವಸಾಮಾನ್ಯ ವ್ಯಕ್ತಿ ಆಪತ್ಕಾಲದ ಸ್ಥಿತಿಯಲ್ಲಿ ತುಂಬಾ ಹೆದರುತ್ತಾನೆ. ಆದರೆ ಸಾಧನೆಯನ್ನು ಮಾಡುವವರ(ಸಾಧಕರ) ಮನಸ್ಸಿನಲ್ಲಿ ಮಾತ್ರ ‘ಈ ಕಠಿಣ ಪ್ರಸಂಗದಲ್ಲಿ ದೇವರು ನಮ್ಮ ರಕ್ಷಣೆಯನ್ನು ಮಾಡುತ್ತಾನೆ, ಎನ್ನುವ ದೃಢ ವಿಶ್ವಾಸವಿರುವುದರಿಂದ ಅವರು ಕಠಿಣ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿರಬಲ್ಲರು.