ಬೆಂಗಳೂರು ಗಲಭೆ : ಮತಾಂಧ ರಾಜಕೀಯ ಪಕ್ಷ ‘ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ ಷಡ್ಯಂತ್ರ !
ಮಹಮ್ಮದ್ ಪೈಗಂಬರರ ಬಗ್ಗೆ ಕಾಂಗ್ರೆಸ್ ಶಾಸಕ ಶ್ರೀನಿವಾಸಮೂರ್ತಿಯವರ ಅಳಿಯ ನವೀನ ಇವರು ತಥಾಕಥಿತ ಆಕ್ಷೇಪಾರ್ಹ ಪೋಸ್ಟನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರೆಂದು, ಮತಾಂಧರು ೧೧ ಆಗಸ್ಟ್ ೨೦೨೦ ರಂದು ಬೆಂಗಳೂರಿನಲ್ಲಿ ಗಲಭೆಯನ್ನು ಮಾಡಿದರು. ಇಲ್ಲಿಯ ೨ ಪೊಲೀಸ್ ಠಾಣೆಗಳ ಮೇಲೆ ಆಕ್ರಮಣ ನಡೆಸಿ ಅವುಗಳನ್ನು ಸುಟ್ಟರು. ಈ ಗಲಭೆಯಲ್ಲಿ ೬೦ ಮಂದಿ ಪೊಲೀಸರು ಗಾಯಗೊಂಡಿದ್ದರೆ, ೩೦೦ಕ್ಕಿಂತ ಅಧಿಕ ವಾಹನಗಳನ್ನು ಸುಡಲಾಯಿತು.