ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು ಮತ್ತು ಹಿತಚಿಂತಕರಲ್ಲಿ ವಿನಂತಿ
ಕೊರೋನಾ ಮಹಾಮಾರಿ, ಆರ್ಥಿಕ ಮಹಾಕುಸಿತ ಮತ್ತು ಗಡಿಯಲ್ಲಿರುವ ಯುದ್ಧಜನ್ಯ ಸ್ಥಿತಿ, ಇಂತಹ ಆಪತ್ಕಾಲದ ಲಕ್ಷಣಗಳನ್ನು ಸದ್ಯ ನಾವು ಅನುಭವಿಸುತ್ತಿದ್ದೇವೆ. ಅಂದರೆ ಆಪತ್ಕಾಲವು ಈಗಾಗಲೇ ಬಂದಾಗಿದೆ. ಈ ಆಪತ್ಕಾಲದ ತೀವ್ರತೆಯು ಹೆಚ್ಚಾಗುವ ಮೊದಲೇ, ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮಾಡಲು ಅವಕಾಶವಿದೆ. ಅಧ್ಯಾತ್ಮಪ್ರಸಾರವು, ಸನಾತನದ ಮುಖ್ಯ ಕಾರ್ಯವಾಗಿದೆ. ಕೊರೋನಾದ ಸಂಕಟದಿಂದಾಗಿ ‘ಆನ್ಲೈನ್’ ಮಾಧ್ಯಮಗಳಿಂದಲೇ ಅಧ್ಯಾತ್ಮಪ್ರಸಾರದ ಕಾರ್ಯವು ದೊಡ್ಡ ಪ್ರಮಾಣದಲ್ಲಿ ಮುನ್ನಡೆಯುತ್ತಿದೆ.