ಕಾರ್ಕಳದಲ್ಲಿ ವಿವಾಹಿತ ಹಿಂದೂ ಮಹಿಳೆಯೊಂದಿಗೆ ಸುತ್ತಾಡುತ್ತಿದ್ದ ಮುಸ್ಲಿಂ ಬಸ್ ಚಾಲಕ ಪೊಲೀಸರ ವಶಕ್ಕೆ!

  • ಶೃಂಗೇರಿ ಮಠದ ಬಳಿ ಕಾರ್ಯಾಚರಣೆ!

  • ಲವ್ ಜಿಹಾದ್ ಶಂಕೆ ವ್ಯಕ್ತ!

  • ಸ್ಥಳೀಯರು ಬಜರಂಗ ದಳಕ್ಕೆ ಮಾಹಿತಿ ನೀಡಿದ ನಂತರ ಕಾರ್ಯಕರ್ತರು ಸಕ್ರಿಯ!

ಕಾರ್ಕಳ – ಇಬ್ಬರು ಮಕ್ಕಳ ತಂದೆಯಾಗಿರುವ ಮುಸ್ಲಿಂ ಬಸ್ ಚಾಲಕನೊಬ್ಬ ವಿವಾಹಿತ ಹಿಂದೂ ಮಹಿಳೆಯೊಂದಿಗೆ ಇಲ್ಲಿನ ಶೃಂಗೇರಿ ಮಠದ ಬಳಿ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದನು. ಸ್ಥಳೀಯರ ದೂರಿನ ಮೇರೆಗೆ ಬಜರಂಗ ದಳದ ಕಾರ್ಯಕರ್ತರು ಸಕ್ರಿಯರಾಗಿ, ಈ ಜೋಡಿಯನ್ನು ತಡೆದು ಶೃಂಗೇರಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಈ ಜೋಡಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಠದ ಆವರಣದಲ್ಲಿ ಇಂತಹ ಘಟನೆಗಳಿಂದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುವುದರಿಂದ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು ಲವ್ ಜಿಹಾದ್ ಪ್ರಕರಣ ಎಂದು ಹೇಳಲಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ನಡೆಯುತ್ತಿದೆ. ಸ್ಥಳೀಯರು ಹಾಗೂ ಹಿಂದುತ್ವನಿಷ್ಠ ಸಂಘಟನೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.

ಸಂಪಾದಕೀಯ ನಿಲುವು

  • ಇದರಿಂದ ‘ಜನರಿಗೆ ಪೊಲೀಸರಿಗಿಂತ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲೆ ಹೆಚ್ಚು ವಿಶ್ವಾಸವಿದೆ’ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೊಲೀಸರ ಕರ್ತವ್ಯ ನಿರ್ಲಕ್ಷ್ಯವೇ ಕಾರಣವೇ? ಎಂಬುದನ್ನೂ ಪರಿಗಣಿಸಬೇಕು!
  • ಇದು ಲವ್ ಜಿಹಾದ್ ಪ್ರಕರಣ ಎಂದು ಸಾಬೀತಾದರೂ, ಕಾಂಗ್ರೆಸ್ ಆಡಳಿತದಲ್ಲಿ ಮತಾಂಧರಿಗೆ ಶಿಕ್ಷೆಯಾಗುವುದು ಅಸಂಭವವೇ ಆಗಿದೆ!