ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದ ಪ್ರಧಾನಿ ಮೋದಿ ಅವರ ಪ್ರಚೋದನಕಾರಿ ಭಾಷಣವು ಈಗಾಗಲೇ ಉದ್ವಿಗ್ನವಾಗಿರುವ ವಾತಾವರಣವನ್ನು ಇನ್ನಷ್ಟು ಅಸ್ಥಿರಗೊಳಿಸಬಹುದು. ಪ್ರಧಾನಿ ಮೋದಿ ಅವರ ಹೇಳಿಕೆಗಳಿಂದ ಭಾರತವು ನಡೆಸಿದ ದಾಳಿಗಳನ್ನು ಬೆಂಬಲಿಸಲು ಅವರು ಸುಳ್ಳು ಕಥೆಗಳನ್ನು ರಚಿಸಿದ್ದಾರೆ ಎಂದು ತೋರುತ್ತದೆ. ಪಾಕಿಸ್ತಾನವು ಕದನ ವಿರಾಮ ಒಪ್ಪಂದವನ್ನು ಅನುಸರಿಸುತ್ತಿದೆ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪಾಕಿಸ್ತಾನವು ಪ್ರಧಾನಿ ಮೋದಿ ಅವರ ಪಂಜಾಬ್ನ ಆದಂಪುರ ವಾಯುಪಡೆಯ ನೆಲೆಯಲ್ಲಿ ನೀಡಿದ ಮಾರ್ಗದರ್ಶನವನ್ನು ಟೀಕಿಸಿದೆ. ಭಾರತದಲ್ಲಿ ಮುಗ್ಧ ಜನರ ರಕ್ತ ಸುರಿಸಿದರೆ, ವಿನಾಶ ಮತ್ತು ಸಾಮೂಹಿಕ ವಿನಾಶ ಮಾತ್ರ ಸಂಭವಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಶಫಕತ್ ಅಲಿ ಖಾನ್ ಹೇಳಿಕೆಯನ್ನು ಬಿಡುಗಡೆ ಮಾಡಿ, ಮೋದಿ ಅವರ ಹೇಳಿಕೆಗಳು ತಪ್ಪು ಮಾಹಿತಿ, ರಾಜಕೀಯ ಲಾಭ ಪಡೆಯುವ ಪ್ರಯತ್ನ ಮತ್ತು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಹೇಳಿದ್ದಾರೆ.
‘ಭಾರತದ ದಾಳಿಯಿಂದ ಪಾಕಿಸ್ತಾನ ಸಂಘಟಿತವಾಗಿದೆ!’ – ಅಧ್ಯಕ್ಷ ಜರ್ದಾರಿ ಅವರ ಹಾಸ್ಯಾಸ್ಪದ ಹೇಳಿಕೆ
ಭಾರತದ ದಾಳಿಯಿಂದ ಪಾಕಿಸ್ತಾನದ ಜನರು ಸಂಘಟಿತರಾಗಿದ್ದಾರೆ, ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ. ಅವರು, ಪಾಕಿಸ್ತಾನದ ಸೇನೆಯು ಯಾವುದೇ ದಾಳಿಯನ್ನು ಹಿಮ್ಮೆಟ್ಟಿಸಲು ಸದಾ ಸಿದ್ಧವಾಗಿರುತ್ತದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವದ ಮೇಲಿನ ಪ್ರತಿಯೊಂದು ದಾಳಿಗೂ ಪಾಕಿಸ್ತಾನವು ಸೂಕ್ತ ಉತ್ತರ ನೀಡುತ್ತದೆ, ಎಂದು ಅವರು ಹೇಳಿದ್ದಾರೆ.
ಸಂಪಾದಕೀಯ ನಿಲುವು
|